ಪ್ರಾಚೀನ ರಾಶಿಚಕ್ರದ ನಿಮ್ಮ ಧನು ರಾಶಿ

ಸಗಿಟ್ಟಾರಿಯಸ್, ಅಥವಾ ಧನು ರಾಶಿ, ರಾಶಿಚಕ್ರದ ನಾಲ್ಕನೇ ನಕ್ಷತ್ರಪುಂಜವಾಗಿದೆ ಮತ್ತು ಇದು ಸವಾರಿ ಬಿಲ್ಲುಗಾರನ ಸಂಕೇತವಾಗಿದೆ. ಧನು ರಾಶಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ‘ಬಿಲ್ಲುಗಾರ’ ಎಂಬದಾಗಿದೆ. ಪ್ರಾಚೀನ ಜ್ಯೋತಿಷ್ಯ ರಾಶಿಚಕ್ರದ ಇಂದಿನ ಜಾತಕ ಓದುವಲ್ಲಿ, ನೀವು ಪ್ರೀತಿ, ಅದೃಷ್ಟ, ಆರೋಗ್ಯವನ್ನು, ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಕಾಣಲು, ಧನು ರಾಶಿಯ ಜಾತಕ ಸಲಹೆಯನ್ನು ಅನುಸರಿಸುತ್ತೀರಿ.

ಆದರೆ ಅದರ ಪ್ರಾರಂಭದಲ್ಲಿ ಈ ರೀತಿ ಓದಲಾಗಿದೆಯೇ?

ಎಚ್ಚರಿಕೆಯಿಂದ! ಇದಕ್ಕೆ ಉತ್ತರಿಸುವುದರಿಂದ ನಿಮ್ಮ ಜಾತಕವನ್ನು ಅನಿರೀಕ್ಷಿತ ರೀತಿಯಲ್ಲಿ ತೆರೆಯುತ್ತದೆ. ನೀವು ಬೇರೆ ಪ್ರಯಾಣವನ್ನು ಪ್ರಾರಂಭಿಸುವಿರಿ ನಂತರ ನಿಮ್ಮ ಕುಂಡ್ಲಿಯನ್ನು ಪರಿಶೀಲಿಸುವಾಗ ಉದ್ದೇಶಿಸಿದ್ದೀರಿ …

ನಾವು ಪ್ರಾಚೀನ ಜ್ಯೋತಿಷ್ಯವನ್ನು ಅನ್ವೇಷಿಸಿದ್ದೇವೆ ಮತ್ತು ಪುರಾತನ ಕುಂಡ್ಲಿಯ ಕನ್ಯಾರಾಶಿಯಿಂದ ವೃಶ್ಚಿಕ ರಾಶಿಯನ್ನು ಪರಿಶೀಲಿಸಿ,  ನಾವು ಧನು ರಾಶಿಯೊಂದಿಗೆ ಮುಂದುವರಿಯುತ್ತೇವೆ.

ಧನು ರಾಶಿ ನಕ್ಷತ್ರಪುಂಜದ ಮೂಲಗಳು

ಧನು ರಾಶಿ ಒಂದು ನಕ್ಷತ್ರಪುಂಜವಾಗಿದ್ದು, ಇದು ಸವಾರಿ ಬಿಲ್ಲುಗಾರನ ಚಿತ್ರವನ್ನು ರೂಪಿಸುತ್ತದೆ, ಸಾಮಾನ್ಯವಾಗಿ ಮನುಷ್ಯ ಕುದುರೆಯಂತೆ ತೋರಿಸಲಾಗುತ್ತದೆ. ಧನು ರಾಶಿಯನ್ನು ರೂಪಿಸುವ ನಕ್ಷತ್ರಗಳು ಇಲ್ಲಿವೆ. ನೀವು ಈ ನಕ್ಷತ್ರ ಚಿತ್ರದಲ್ಲಿ ಮನುಷ್ಯ ಕುದುರೆ, ಕುದುರೆ, ಅಥವಾ ಬಿಲ್ಲುಗಾರನನ್ನು ಹೋಲುವ ಯಾವುದನ್ನಾದರೂ ನೋಡಬಹುದೇ?

 ಧನು ರಾಶಿ ನಕ್ಷತ್ರಪುಂಜದ ಚಿತ್ರ

ನಾವು ‘ಧನು ರಾಶಿ’ಯಲ್ಲಿರುವ ನಕ್ಷತ್ರಗಳನ್ನು ರೇಖೆಗಳೊಂದಿಗೆ ಸಂಪರ್ಕಿಸಿದರೂ ಸಹ ಸವಾರಿ ಬಿಲ್ಲುಗಾರನನ್ನು ‘ನೋಡುವುದು’ ಇನ್ನೂ ಕಷ್ಟಕರವಾದದ್ದಾಗಿದೆ. ಆದರೆ ಈ ಚಿಹ್ನೆ ಮಾನವ ಇತಿಹಾಸದಲ್ಲಿ ನಮಗೆ ತಿಳಿದಿರುವಷ್ಟು ಹಿಂದಕ್ಕೆ ಹೋಗುತ್ತದೆ.

 ಧನು ರಾಶಿ ನಕ್ಷತ್ರಪುಂಜಗಳು ರೇಖೆಗಳೊಂದಿಗೆ ಸಂಪರ್ಕ ಹೊಂದಿವೆ

ಐಗುಪ್ತದ ಡೆಂಡೆರಾ ದೇವಾಲಯದಲ್ಲಿನ ರಾಶಿಚಕ್ರ ಇಲ್ಲಿದೆ, ಅದು 2000 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದದ್ದು, ಮತ್ತು ಧನು ರಾಶಿಯನ್ನು ಕೆಂಪು ಬಣ್ಣದ ವೃತ್ತದಲ್ಲಿ ತೋರಿಸಲಾಗಿದೆ.

ಐಗುಪ್ತದ ಪ್ರಾಚೀನ ಡೆಂಡೆರಾ ರಾಶಿಚಕ್ರದಲ್ಲಿ ಧನು ರಾಶಿ

ರಾಷ್ಟ್ರೀಯ ಭೌಗೋಳಿಕ ರಾಶಿಚಕ್ರದ ಪ್ರಕಟಣಾ ಪತ್ರಿಕೆ ದಕ್ಷಿಣ ಗೋಳಾರ್ಧದಲ್ಲಿ ಕಂಡುಬರುವಂತೆ ಧನು ರಾಶಿಯನ್ನು ತೋರಿಸುತ್ತದೆ. ಧನು ರಾಶಿ ನಕ್ಷತ್ರಗಳನ್ನು ರೇಖೆಗಳೊಂದಿಗೆ ಸಂಪರ್ಕಿಸಿದ ನಂತರವೂ ಈ ನಕ್ಷತ್ರಪುಂಜದಲ್ಲಿ ಸವಾರ ಅಥವಾ ಕುದುರೆಯನ್ನು ‘ನೋಡುವುದು’ ಕಷ್ಟಕರವಾಗಿದೆ.

 ರಾಷ್ಟ್ರೀಯ ಭೌಗೋಳಿಕ ನಕ್ಷತ್ರಪುಂಜದ ನಕ್ಷೆಯಲ್ಲಿ ಧನು ರಾಶಿ

ಹಿಂದಿನ ನಕ್ಷತ್ರಪುಂಜಗಳಂತೆ, ಬಿಲ್ಲುಗಾರನ ಚಿತ್ರವು ನಕ್ಷತ್ರಪುಂಜದಿಂದಲೇ ಬರುವುದಿಲ್ಲ. ಬದಲಾಗಿ, ಮೊದಲ ಜ್ಯೋತಿಷಿಗಳು ನಕ್ಷತ್ರಗಳನ್ನು ಹೊರತುಪಡಿಸಿ, ಮೊದಲೇ ಸವಾರಿ ಬಿಲ್ಲುಗಾರನ ಬಗ್ಗೆ ಯೋಚಿಸಿದರು. ನಂತರ ಅವರು ಈ ಚಿತ್ರವನ್ನು ನಕ್ಷತ್ರಪುಂಜಕ್ಕೆ ಸಂಕೇತವಾಗಿ ಇರಿಸಿದರು. ಕೆಳಗೆ ಒಂದು ವಿಶಿಷ್ಟವಾದ ಧನು ರಾಶಿ ಚಿತ್ರವಿದೆ. ಆದರೆ ನಾವು ಧನು ರಾಶಿಯನ್ನು ಸುತ್ತಮುತ್ತಲಿನ ನಕ್ಷತ್ರಪುಂಜಗಳೊಂದಿಗೆ ನೋಡುವಾಗ ಅದರ ಅರ್ಥವನ್ನು ಕಲಿಯುತ್ತೇವೆ.

 ವಿಶಿಷ್ಟ ಧನು ರಾಶಿ ಜ್ಯೋತಿಷ್ಯ ನಕ್ಷತ್ರಪುಂಜದ ಚಿತ್ರ

ಮೂಲ ರಾಶಿಚಕ್ರ ಕಥೆ

ನಿಮ್ಮ ಜನನದ ಸಮಯ ಮತ್ತು ಗ್ರಹಗಳ ಚಲನೆಯನ್ನು ಆಧರಿಸಿ ಅದೃಷ್ಟ, ಆರೋಗ್ಯ, ಪ್ರೀತಿ ಮತ್ತು ಭಾಗ್ಯದ ಕಡೆಗೆ ನಿಮ್ಮ ದೈನಂದಿನ ನಿರ್ಧಾರಗಳನ್ನು ಮಾರ್ಗದರ್ಶಿಸಲು ಮೂಲ ರಾಶಿಚಕ್ರವು ಜಾತಕವಲ್ಲ. ಆರಂಭಿಕ ಮಾನವರು ಈ ಯೋಜನೆಯನ್ನು ನಕ್ಷತ್ರಗಳಲ್ಲಿನ 12 ರಾಶಿಚಕ್ರ ನಕ್ಷತ್ರಪುಂಜಗಳನ್ನು ಗುರುತಿಸುವ ಮೂಲಕ ನೆನಪಿಸಿಕೊಂಡರು. ನಮ್ಮ ಆರಂಭಿಕ ಪೂರ್ವಜರು ನಾವು ಪ್ರತಿ ರಾತ್ರಿಯೂ ಈ ನಕ್ಷತ್ರಪುಂಜಗಳನ್ನು ನೋಡಬೇಕು ಮತ್ತು ವಾಗ್ಧಾನಗಳನ್ನು ನೆನಪಿಸಿಕೊಳ್ಳಬೇಕೆಂದು ಬಯಸಿದರು. ಮೂಲತಃ ಜ್ಯೋತಿಷ್ಯ ನಕ್ಷತ್ರಗಳಲ್ಲಿ ಈ ಕಥೆಯ ಅಧ್ಯಯನ ಮತ್ತು ಜ್ಞಾನವಾಗಿತ್ತು.

ಈ ಕಥೆ ಕನ್ಯಾರಾಶಿಯಲ್ಲಿನ ಕನ್ಯೆಯ ಸಂತಾನದೊಂದಿಗೆ ಪ್ರಾರಂಭವಾಯಿತು. ಇದು ತುಲಾ ರಾಶಿಯ ತೂಕದ ಮಾಪಕಗಳೊಂದಿಗೆ ಮುಂದುವರಿಯಿತು, ನಮ್ಮ ಕಾರ್ಯಗಳ ಸಮತೋಲನವು ತುಂಬಾ ಹಗುರವಾಗಿರುತ್ತದೆ ಮತ್ತು ನಮ್ಮ ಲಘು ಕಾರ್ಯಗಳನ್ನು ಪುನಃ ಪಡೆದುಕೊಳ್ಳಲು ಪಾವತಿಯ ಅಗತ್ಯವಿರುತ್ತದೆ ಎಂಬುದು ಒಂದು ಜ್ಞಾಪನೆಯಾಗಿರುತ್ತದೆ. ವೃಶ್ಚಿಕ ಕನ್ಯಾರಾಶಿಯ ಸಂತಾನ ಮತ್ತು ವೃಶ್ಚಿಕದ ನಡುವಿನ ಬಹುದೊಡ್ಡದಾದ ಹೋರಾಟವನ್ನು ತೋರಿಸಿದೆ. ಅವರದು ಆಳುವ ಹಕ್ಕಿನ ಹೋರಾಟವಾಗಿದೆ.

ರಾಶಿಚಕ್ರ ಕಥೆಯಲ್ಲಿ ಧನು ರಾಶಿ

ಈ ಹೋರಾಟ ಹೇಗೆ ಕೊನೆಗೊಳ್ಳುತ್ತದೆ ಎಂದು ಧನು ರಾಶಿ ಮುನ್ಸೂಚನೆ ನೀಡುತ್ತದೆ. ನಾವು ಸುತ್ತಮುತ್ತಲಿನ ನಕ್ಷತ್ರಪುಂಜಗಳೊಂದಿಗೆ ನೋಡುವಾಗ ನಮಗೆ ಅರ್ಥವಾಗುತ್ತದೆ. ಈ ಜ್ಯೋತಿಷ್ಯ ಸನ್ನಿವೇಶ ಧನು ರಾಶಿಯ ಅರ್ಥವನ್ನು ತಿಳಿಸುತ್ತದೆ.

ರಾಶಿಚಕ್ರದಲ್ಲಿ ಧನು ರಾಶಿ – ವೃಶ್ಚಿಕದ ಸಂಪೂರ್ಣ ಸೋಲು

ಧನು ರಾಶಿಯ ಎಳೆಯುವ ಬಾಣವು ನೇರವಾಗಿ ವೃಶ್ಚಿಕದ ಹೃದಯಕ್ಕೆ ಸೂಚಿಸುತ್ತದೆ. ಇದು ಸವಾರಿ ಬಿಲ್ಲುಗಾರ ತನ್ನ ಮಾರಣಾಂತಿಕ ಶತ್ರುವನ್ನು ನಾಶಪಡಿಸುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಪ್ರಾಚೀನ ರಾಶಿಚಕ್ರದಲ್ಲಿ ಧನು ರಾಶಿಯ ಅರ್ಥವಾಗಿದೆ.

 ಧನು ರಾಶಿಯ ಮತ್ತೊಂದು ರಾಶಿಚಕ್ರ ಚಿತ್ರ. ಅವನ ಬಾಣವು ವೃಶ್ಚಿಕದ ಕಡೆಗೆ ನೇರವಾಗಿ ತೋರಿಸಲಾಗುತ್ತದೆ

ಲಿಖಿತ ಕಥೆಯಲ್ಲಿ ಧನು ರಾಶಿ ಅಧ್ಯಾಯ

ಯೇಸುವಿನ ಅಂತಿಮ ವಿಜಯ, ತನ್ನ ಶತ್ರುಗಳ ಮೇಲೆ, ಕನ್ಯೆಯ ಸಂತಾನ, ಧನು ರಾಶಿಯಲ್ಲಿ ಚಿತ್ರಿಸಿದಂತೆ ಸತ್ಯವೇದದಲ್ಲಿ ಸಂಭವಿಸಲು ಪ್ರವಾದಿಸಲಾಗಿದೆ. ಈ ವಿಜಯೋತ್ಸವದ ಲಿಖಿತ ಪ್ರವಾದನೆಯು ಇಲ್ಲಿದೆ.

11.ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು; ಅದರ ಮೇಲೆ ಕೂತಿದ್ದವನಿಗೆ ನಂಬಿಗಸ್ತನೂ ಸತ್ಯವಂತನೂ ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ; 12.ಆತನ ಕಣ್ಣುಗಳು ಬೆಂಕಿಯ ಉರಿಯಂತಿವೆ; ಆತನ ತಲೆಯ ಮೇಲೆ ಅನೇಕ ಮಕುಟಗಳುಂಟು; ಆತನಿಗೆ ಒಂದು ಹೆಸರು ಬರೆದು ಕೊಟ್ಟಿದೆ, ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು. 13.ಆತನು ರಕ್ತಪ್ರೋಕ್ಷಿತವಾದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು. 14.ಪರಲೋಕದಲ್ಲಿರುವ ಸೈನ್ಯದವರು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನ ಹಿಂದೆ ಬರುತ್ತಿದ್ದರು. 15.ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ. 16.ಆತನ ತೊಡೆಯ ಮೇಲಣ ವಸ್ತ್ರದಲ್ಲಿ – ರಾಜಾಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ. 17.ಆಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವದನ್ನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ – ಬನ್ನಿರಿ, ದೇವರು ಮಾಡಿಸುವ ಮಹಾಭೋಜನಕ್ಕೆ ಕೂಡಿಬನ್ನಿರಿ, 18.ರಾಜರ ಮಾಂಸವನ್ನೂ ಸಹಸ್ರಾಧಿಪತಿಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ರಾಹುತರ ಮಾಂಸವನ್ನೂ, ಸ್ವತಂತ್ರರೂ ದಾಸರೂ ದೊಡ್ಡವರೂ ಚಿಕ್ಕವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು.

19.ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕೂತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವದಕ್ಕಾಗಿ ಕೂಡಿ ಬಂದಿರುವದನ್ನು ಕಂಡೆನು. 20.ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ನಮಸ್ಕರಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲ್ಪಟ್ಟರು; 21.ವಿುಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು; ಮತ್ತು ಹಕ್ಕಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆ ತುಂಬಾ ತಿಂದವು.

ಪ್ರಕಟನೆ 19:11-21

1.ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. 2.ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. 3.ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗಬೇಕು.

ಪ್ರಕಟನೆ 20:1-3

7.ಆ ಸಾವಿರ ವರುಷಗಳು ತೀರಿದ ಮೇಲೆ ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವದು. 8.ಅವನು ಹೊರಗೆ ಬಂದು ಭೂವಿುಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು. 9.ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ದಂಡಿಗೂ ನಮ್ಮ ಪ್ರಿಯ ಪಟ್ಟಣಕ್ಕೂ ಮುತ್ತಿಗೆಹಾಕಿದರು. ಆಗ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು. 10.ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.

ಪ್ರಕಟನೆ 20:7-10

ಪ್ರಾಚೀನ ರಾಶಿಚಕ್ರದ ಈ ಮೊದಲ ನಾಲ್ಕು ಚಿಹ್ನೆಗಳು: ಕನ್ಯಾರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನು ರಾಶಿ 12 ಅಧ್ಯಾಯ ರಾಶಿಚಕ್ರ ಕಥೆಯೊಳಗೆ ಜ್ಯೋತಿಷ್ಯ ಘಟಕವನ್ನು ರೂಪಿಸುತ್ತವೆ, ಇದು ಮುಂಬರುವ ಆಡಳಿತಗಾರ ಮತ್ತು ಆತನ  ವಿರೋಧಿಯ ಕಡೆಗೆ ಕೇಂದ್ರೀಕರಿಸುತ್ತದೆ. ಕನ್ಯಾ ರಾಶಿ ಕನ್ಯೆಯ ಸಂತಾನದಿಂದ ಆತನು ಬರುವುದನ್ನು ಮುನ್ಸೂಚಿಸುತ್ತದೆ. ತುಲಾ ರಾಶಿ ನಮ್ಮಲ್ಲಿ ಸಾಕಷ್ಟು ಅರ್ಹತೆ ಇಲ್ಲದಿರುವದರಿಂದ ಬೆಲೆ ಪಾವತಿಸುವ ಅಗತ್ಯವಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ವೃಶ್ಚಿಕ ರಾಶಿ ಆ ಬೆಲೆಯ ಸ್ವಭಾವವನ್ನು ಮುನ್ಸೂಚಿಸಿತು. ಧನು ರಾಶಿ ತನ್ನ ಅಂತಿಮ ವಿಜಯವನ್ನು ಬಿಲ್ಲುಗಾರನ ಬಾಣದೊಂದಿಗೆ ವೃಶ್ಚಿಕದ ಹೃದಯದ ಕಡೆಗೆ ನೇರವಾಗಿ ತೋರಿಸಿದೆ ಎಂಬದಾಗಿ ಮುನ್ಸೂಚಿಸಿತು.

ಈ ಚಿಹ್ನೆಗಳು ಪ್ರತಿ ನಕ್ಷತ್ರಪುಂಜಗಳ ತಿಂಗಳಲ್ಲಿ ಜನಿಸಿದವರಿಗೆ ಮಾತ್ರವಲ್ಲ, ಎಲ್ಲಾ ಜನರಿಗಾಗಿ ನೀಡಲಾಗಿದೆ. ನೀವು ನವೆಂಬರ್ 23 ಮತ್ತು ಡಿಸೆಂಬರ್ 21 ರ ನಡುವೆ ಜನಿಸದಿದ್ದರೂ ಧನು ರಾಶಿ ನಿಮಗಾಗಿ ಆಗಿದೆ. ಮನು/ಆದಾಮನ ಮಕ್ಕಳು ಅವುಗಳನ್ನು ನಕ್ಷತ್ರಗಳಲ್ಲಿ ಇರಿಸಿದ್ದಾರೆ ಆದ್ದರಿಂದ ನಾವು ಶತ್ರುಗಳ ಮೇಲಿನ ಅಂತಿಮ ವಿಜಯವನ್ನು ತಿಳಿದುಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ವಿಧೇಯತೆಯನ್ನು ಆರಿಸಿಕೊಳ್ಳಬಹುದು. ಯೇಸುವಿನ ಮೊದಲ ಬರುವಿಕೆಯು ಕನ್ಯಾರಾಶಿ, ತುಲಾ ರಾಶಿ ಮತ್ತು ವೃಶ್ಚಿಕ ರಾಶಿ ಪೂರೈಸಿತು. ಧನು ರಾಶಿಯ ನೆರವೇರಿಕೆಯು ಆತನ ಎರಡನೆಯ ಬರುವಿಕೆಯನ್ನು ಕಾಯುತ್ತಿದೆ. ಆದರೆ ಮೊದಲ ಮೂರು ಚಿಹ್ನೆಗಳ ಸಾಧನೆ ಪೂರ್ಣಗೊಳ್ಳುವದರೊಂದಿಗೆ, ಅಂತೆಯೇ ಧನು ರಾಶಿ ಚಿಹ್ನೆಯು ಅದರ ನೆರವೇರಿಕೆಯನ್ನು ಕಂಡುಕೊಳ್ಳುವದು ಎಂದು ನಂಬಲು ನಮಗೆ ಒಂದು ಕಾರಣವಿದೆ.

ಪ್ರಾಚೀನ ಧನು ರಾಶಿ ಜಾತಕ

ಜಾತಕವು ಗ್ರೀಕ್ ಪದವಾದ ‘ಹೋರೋ’ (ಸಮಯ) ದಿಂದ ಬಂದಿದೆ ಮತ್ತು ಧನು ರಾಶಿಯ ‘ಸಮಯ’ ಸೇರಿದಂತೆ ಸತ್ಯವೇದವು  ನಮಗೆ ಈ ಸಮಯವನ್ನು ಗುರುತಿಸುತ್ತದೆ. ಧನು ರಾಶಿಯ ಹೋರೋ ಓದುವಿಕೆ

36.ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.

44.ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.

ಮತ್ತಾಯನು 24:36, 44

ತನ್ನ ಬರೋಣ ಮತ್ತು ಶತ್ರುವಿನ  ಸಂಪೂರ್ಣ ಸೋಲಿನ ನಿಖರವಾದ ಸಮಯವು (ಹೋರೋ) ದೇವರನ್ನು ಹೊರತುಪಡಿಸಿ ಯಾರಿಗೂ ತಿಳಿಯುವದಿಲ್ಲ ಎಂದು ಯೇಸು ನಮಗೆ ಹೇಳುತ್ತಾನೆ. ಆದಾಗ್ಯೂ, ಆ ಸಮಯದ ಸಮೀಪವನ್ನು ಸೂಚಿಸುವ ಸುಳಿವುಗಳಿವೆ. ಅದು ನಾವು ಅದಕ್ಕೆ ಸಿದ್ಧರಾಗುವದಿಲ್ಲವೆಂಬಂತೆ ಹೇಳುತ್ತದೆ.

ನಿಮ್ಮ ಧನು ರಾಶಿ ಓದುವಿಕೆ

ಇಂದು ನೀವು ಮತ್ತು ನಾನು ಧನು ರಾಶಿಯ ಜಾತಕ ಓದುವಿಕೆಯನ್ನು ಈ ಕೆಳಗಿನ ಮಾರ್ಗದರ್ಶನದೊಂದಿಗೆ ಅನ್ವಯಿಸಬಹುದು.

ನೀವು ಕ್ರಿಸ್ತನ ಬರೋಣದ ಮತ್ತು ಸೈತಾನನ ಸಂಪೂರ್ಣ ಸೋಲಿನ ಸಮಯದ ಮೊದಲು ಅನೇಕ ಗೊಂದಲಗಳನ್ನು ಎದುರಿಸುತ್ತೀರಿ ಎಂದು ಧನು ರಾಶಿ ನಮಗೆ ಹೇಳುತ್ತದೆ. ವಾಸ್ತವವಾಗಿ, ನೀವು ಅದನ್ನು ನವೀಕರಿಸುವ ಮೂಲಕ ಪ್ರತಿದಿನ  ನಿಮ್ಮ ಮನಸ್ಸನ್ನು ರೂಪಾಂತರಗೊಳಿಸದಿದ್ದರೆ, ಆಗ ನೀವು ಈ ಪ್ರಪಂಚದ ಗುಣಮಟ್ಟಗಳಿಗೆ ಅನುಗುಣವಾಗಿರುತ್ತೀರಿ. ನಂತರ ಆ ಸಮಯ ನಿಮ್ಮನ್ನು ಅನಿರೀಕ್ಷಿತವಾಗಿ ಹೊಡೆಯುತ್ತದೆ ಮತ್ತು ನೀವು ಆತನ ಬಹಿರಂಗಪಡಿಸುವಿಕೆಯಲ್ಲಿ ಆತನೊಂದಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ನೀವು ಆ ಸಮಯವನ್ನು ಕಳೆದುಕೊಳ್ಳಲಾಗುವ ಎಲ್ಲಾ ಭಯಾನಕ ಪರಿಣಾಮಗಳನ್ನು ಪಡೆದುಕೊಳ್ಳಲು ಬಯಸದಿದ್ದರೆ, ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳಲು ಪ್ರತಿದಿನ ಪ್ರಜ್ಞಾಪೂರ್ವಕ ನಿರ್ಧಾರವನ್ನು ಮಾಡಬೇಕಾಗುತ್ತದೆ. ನೀವು ಬುದ್ದಿಹೀನರಾಗಿ ಪ್ರಖ್ಯಾತ ವ್ಯಕ್ತಿಗಳು ಮತ್ತು ಧಾರವಾಹಿಗಳ ಹರಟೆ ಮತ್ತು ಒಳಸಂಚುಗಳನ್ನು ಅನುಸರಿಸುತ್ತೀರಾ ಎಂದು ಶೇಖರಿಸಿಕೊಳ್ಳಿ. ಹಾಗಿದ್ದಲ್ಲಿ ಅದು ನಿಮ್ಮ ಮನಸ್ಸಿನ ಗುಲಾಮಗಿರಿ, ಈಗ ಆತ್ಮೀಯ ಸಂಬಂಧಗಳನ್ನು ಕಳೆದುಕೊಳ್ಳುವುದು, ಮತ್ತು ಖಂಡಿತವಾಗಿಯೂ ಆತನ ಬರೋಣದ ಸಮಯವನ್ನು ಹೆಚ್ಚಿನವರೊಂದಿಗೆ ಕಳೆದುಕೊಳ್ಳುವಂತಹ ಗುಣಲಕ್ಷಣಗಳಲ್ಲಿ ಬಹಳಷ್ಟು ಪರಿಣಾಮಬೀರುವದು.

ನಿಮ್ಮ ವ್ಯಕ್ತಿತ್ವವು ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿದೆ, ಆದರೆ ನೀವು ಚಂಚಲರಾಗಿ ಉಳಿಯಲು ಬಯಸುವ ಶತ್ರು, ನಿಮ್ಮ ದುರ್ಬಲ ಗುಣಲಕ್ಷಣಗಳ ಮೇಲೆ ಆಕ್ರಮಣ ಮಾಡುತ್ತಾನೆ. ಅದು ನಿಷ್ಫಲ ಹರಟೆ, ಅಶ್ಲೀಲತೆ, ದುರಾಸೆ, ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವದರಲ್ಲಿ ಆಗಿರಬಹುದು, ಆತನು ನೀವು ಬೀಳುವ ಶೋಧನೆಗಳನ್ನು ತಿಳಿದಿದ್ದಾನೆ. ಆದ್ದರಿಂದ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿ ಇದರಿಂದ ನೀವು ನೇರ ಮತ್ತು ಕಿರಿದಾದ ಹಾದಿಯಲ್ಲಿ ನಡೆಯಬಹುದು ಮತ್ತು ಆ ಸಮಯಕ್ಕಾಗಿ ಸಿದ್ಧರಾಗಿರಿ. ಆ ಸಮಯವನ್ನು ಕಳೆದುಕೊಳ್ಳಲು ಇಷ್ಟಪಡದ ಇತರರನ್ನು ಸಹಾ ಹುಡುಕಿ ಮತ್ತು ನೀವು ಪ್ರತಿದಿನ ಒಟ್ಟಿಗೆ ಒಬ್ಬರಿಗೊಬ್ಬರು ಸಹಾಯ ಮಾಡಬಹುದು ಆದ್ದರಿಂದ ಅದು ಅನಿರೀಕ್ಷಿತವಾಗಿ ನಿಮ್ಮ ಮೇಲೆ ಬರುವುದಿಲ್ಲ.

ರಾಶಿಚಕ್ರದ ಕಥೆಯ ಮೂಲಕ ಮತ್ತಷ್ಟು ಮತ್ತು ಧನು ರಾಶಿಗೆ ಆಳವಾಗಿ

ಮುಂದಿನ ನಾಲ್ಕು ರಾಶಿಚಕ್ರ ಚಿಹ್ನೆಗಳು ಸಹ ಜ್ಯೋತಿಷ್ಯ ಘಟಕವನ್ನು ರೂಪಿಸುತ್ತವೆ, ಹೇಗೆ ಇದು ಮಕರ ರಾಶಿಯೊಂದಿಗೆ  ಪ್ರಾರಂಭವಾಗುವ, ಬರಲಿರುವಾತನ ಕೆಲಸವು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ. ಕಥೆಯನ್ನು ಕನ್ಯಾ ರಾಶಿಯೊಂದಿಗೆ ಪ್ರಾರಂಭಿಸಿ, ಅಥವಾ ಅದರ ಆಧಾರವನ್ನು ಇಲ್ಲಿ ಕಲಿಯಿರಿ.

ಧನು ರಾಶಿಯ ಲಿಖಿತ ದಾಖಲೆಯ ಆಳಕ್ಕೆ ಹೋಗಲು ನೋಡಿ

Leave a Reply

Your email address will not be published. Required fields are marked *