ಭ್ರಷ್ಟಗೊಂಡಿದೆ (ಭಾಗ 2)… ನಮ್ಮ ಗುರಿಯನ್ನು ತಪ್ಪುವದು

ನಾವು ಕೊನೆಯದಾಗಿ ನೋಡಿದ್ದು, ವೇದ ಪುಸ್ತಕವು (ಸತ್ಯವೇದ) ನಮ್ಮನ್ನು ಮಾಡಲ್ಪಟ್ಟ ದೇವರ ಮೂಲ ಸ್ವರೂಪದಿಂದ ಹೇಗೆ ಭ್ರಷ್ಟರಾಗಿದ್ದೇವೆ ಎಂದು ನಮಗೆ  ವಿವರಿಸುತ್ತದೆ. ಇದನ್ನು ಉತ್ತಮವಾಗಿ ‘ನೋಡಲು’ ನನಗೆ ಸಹಾಯ ಮಾಡಿದ ಚಿತ್ರವೆಂದರೆ ಎಲ್ಫ್ಗ ಳಿಂದ  ಭ್ರಷ್ಟಗೊಂಡ, ಮಧ್ಯ ಭೂಮಿಯ ಓರ್ಕ್ಸ್.  ಆದರೆ ಇದು ಹೇಗೆ ಸಂಭವಿಸಿತು?

ಪಾಪದ ಮೂಲ

ಇದನ್ನು ಸತ್ಯವೇದದ ಆದಿಕಾಂಡ ಪುಸ್ತಕದಲ್ಲಿ ದಾಖಲಿಸಲಾಗಿದೆ. ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಸ್ವಲ್ಪ ಸಮಯದ ನಂತರ ಮೊದಲ ಮನುಷ್ಯರನ್ನು ಪರೀಕ್ಷಿಸಲಾಯಿತು. ವರ್ಣನೆಯು ‘ಸರ್ಪ’ದೊಂದಿಗೆ ವಿನಿಮಯವನ್ನು ದಾಖಲಿಸುತ್ತದೆ. ಸಾರ್ವತ್ರಿಕವಾಗಿ ಯಾವಾಗಲೂ ಸರ್ಪವು ಸೈತಾನನೆಂದು ಅರ್ಥೈಸಲ್ಪಟ್ಟಿದೆ – ದೇವರಿಗೆ ಎದುರಾಳಿಯಾದ ಆತ್ಮ. ಸತ್ಯವೇದದ ಮೂಲಕ, ಸೈತಾನನು ಸಾಮಾನ್ಯವಾಗಿ ಇನ್ನೊಬ್ಬ ವ್ಯಕ್ತಿಯು ಮಾತನಾಡುವ ಮೂಲಕ ಕೆಟ್ಟದ್ದನ್ನು ಪ್ರಚೋದಿಸುತ್ತಾನೆ. ಈ ಸಂದರ್ಭದಲ್ಲಿ ಅವನು ಸರ್ಪದ ಮೂಲಕ ಮಾತನಾಡಿದನು . ಇದನ್ನು ಈ ರೀತಿ ದಾಖಲಿಸಲಾಗಿದೆ.

  ರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು. ಅದು ಸ್ತ್ರೀಗೆ–ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು.
2 ಆಗ ಸ್ತ್ರೀಯು ಸರ್ಪಕ್ಕೆ–ತೋಟದ ಮರಗಳ ಫಲಗಳನ್ನು ನಾವು ತಿನ್ನಬಹುದು.
3 ಆದರೆ ತೋಟದ ಮಧ್ಯದಲ್ಲಿ ರುವ ಮರದ ಫಲದ ವಿಷಯದಲ್ಲಿ ದೇವರು–ನೀವು ಸಾಯದ ಹಾಗೆ ಅದನ್ನು ತಿನ್ನಲೂ ಬಾರದು, ಮುಟ್ಟಲೂ ಬಾರದು ಎಂದು ಹೇಳಿದ್ದಾನೆ ಅಂದಳು.
4 ಸರ್ಪವು ಸ್ತ್ರೀಗೆ–ನೀವು ಖಂಡಿತವಾಗಿ ಸಾಯುವದಿಲ್ಲ;
5 ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು.
6 ಸ್ತ್ರೀಯು–ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.

ಆದಿಕಾಂಡ 3: 1-6

ಅವರ ಶೋಧನೆಯ ಮೂಲ ಆಯ್ಕೆಯು ‘ದೇವರಂತೆ’ ಆಗಬೇಕು ಎನ್ನುವದಾಗಿತ್ತು.  ಈ ವಿಷಯದವರೆಗೆ ಅವರು ಎಲ್ಲದಕ್ಕೂ ದೇವರನ್ನು ನಂಬಿದ್ದರು ಮತ್ತು ಸರಳವಾಗಿ ಎಲ್ಲಾ ವಿಷಯದಲ್ಲೂ ಆತನ ಮಾತಿನಂತೆ ಮಾಡುತ್ತಿದ್ದರು. ಆದರೆ ಈಗ ಅವರು ಅದನ್ನು ಬಿಟ್ಟು, ‘ದೇವರಂತೆ’ ಆಗಲು, ತಮ್ಮನ್ನೇ ನಂಬಲು ಮತ್ತು ತಮ್ಮದೇ ಆದ ತೀರ್ಮಾವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿದ್ದರು. ಅವರು ಸ್ವತಃ ‘ದೇವರುಗಳು’ ಆಗಬಹುದು, ತಮ್ಮದೇ ಹಡಗಿನ ನಾಯಕರು, ತಮ್ಮ ಹಣೆಬರಹದ ಗುರುಗಳು, ಸ್ವಾಯತ್ತರು ಮತ್ತು ತಮಗೆ ಮಾತ್ರ ಉತ್ತರಿಸಬಹುದು.

ಅವರು ದೇವರ ವಿರುದ್ಧ ನಡೆಸಿದ ದಂಗೆಯಲ್ಲಿ ಅವರಲ್ಲೇನೋ ಬದಲಾಗಿದೆ. ಅದ್ಯಾಯವು ವಿವರಿಸಿದಂತೆ, ಅವರು ಅವಮಾನವನ್ನು ಅನುಭವಿಸಿದರು ಮತ್ತು ಮುಚ್ಚಿಡಲು ಪ್ರಯತ್ನಿಸಿದರು. ವಾಸ್ತವವಾಗಿ, ಸ್ವಲ್ಪ ಸಮಯದ ನಂತರ, ದೇವರು ತನ್ನ ಅವಿಧೇಯತೆಯ ಬಗ್ಗೆ ಆದಾಮನನ್ನು ಎದುರಿಸಿದಾಗ, ಆದಾಮನು ಹವ್ವಳನ್ನು  (ಮತ್ತು ಅವಳನ್ನು ಸೃಷ್ಟಿಸಿದ ದೇವರು) ದೂಷಿಸಿದನು. ಅವಳು ತಿರುಗಿ ಸರ್ಪವನ್ನು ದೂಷಿಸುತ್ತಾಳೆ. ಯಾರೂ ಜವಾಬ್ದಾರಿಯನ್ನು ಸ್ವೀಕರಿಸಲಿಲ್ಲ.

ಆದಾಮನ ದಂಗೆಯ ಪರಿಣಾಮಗಳು

ಮತ್ತು ಆ ದಿನ ಪ್ರಾರಂಭವಾದದ್ದು ಮುಂದುವರೆದಿದೆ ಏಕೆಂದರೆ ನಾವು ಅದೇ ಸಹಜವಾದ ಸ್ವಭಾವವನ್ನು ಆನುವಂಶಿಕವಾಗಿ ಪಡೆದಿದ್ದೇವೆ. ಅದಕ್ಕಾಗಿಯೇ ನಾವು ಆದಾಮನಂತೆ ವರ್ತಿಸುತ್ತೇವೆ – ಏಕೆಂದರೆ ನಾವು ಅವನ ಸ್ವಭಾವವನ್ನು ಆನುವಂಶಿಕವಾಗಿ ಪಡೆದಿದ್ದೇವೆ. ಆದಾಮನ ದಂಗೆಗೆ ನಮ್ಮನ್ನು ದೂಷಿಸಲಾಗಿದೆ ಎಂದು ಕೆಲವರು ಸತ್ಯವೇದವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ವಾಸ್ತವವಾಗಿ, ಆದಾಮ ಒಬ್ಬನೇ ದೂಷಿಸಲ್ಪಟ್ಟದ್ದು ಆದರೆ ನಾವು ಆ ದಂಗೆಯ ಪರಿಣಾಮಗಳಲ್ಲಿ ಬದುಕುತ್ತೇವೆ. ನಾವು ಅದನ್ನು ಅನುವಂಶಿಕತೆಯ ಶಾಸ್ತ್ರದಲ್ಲಿ ಯೋಚಿಸಬಹುದು. ಮಕ್ಕಳು ತಮ್ಮ ಹೆತ್ತವರ ಗುಣಲಕ್ಷಣಗಳನ್ನು ಗಳಿಸುವರು – ಒಳ್ಳೆಯದು ಮತ್ತು ಕೆಟ್ಟದ್ದು- ವಂಶವಾಹಿಗಳನ್ನು ಆನುವಂಶಿಕವಾಗಿ ಪಡೆಯುವ ಮೂಲಕ. ನಾವು ಆದಾಮನ ಈ ದಂಗೆಯೇಳುವ ಸ್ವಭಾವವನ್ನು ಆನುವಂಶಿಕವಾಗಿ ಹೊಂದಿದ್ದೇವೆ ಮತ್ತು ಹಾಗೆಯೇ ಸಹಜವಾಗಿ, ಬಹುತೇಕ ಅರಿವಿಲ್ಲದೆ, ಆದರೆ ಅವನು ಪ್ರಾರಂಭಿಸಿದ ದಂಗೆಯನ್ನು ನಾವು ಉದ್ದೇಶಪೂರ್ವಕವಾಗಿ ಮುಂದುವರಿಸುತ್ತೇವೆ. ನಾವು ಜಗತ್ತಿನ ದೇವರಾಗಲು ಬಯಸದಿರಬಹುದು, ಆದರೆ ನಾವು ನಮ್ಮ ಸುತ್ತಮುತ್ತಲು ದೇವರುಗಳಾಗಲು ಬಯಸುತ್ತೇವೆ; ದೇವರಿಂದ ಸ್ವಾಯತ್ತತೆ.

ಪಾಪದ ಪರಿಣಾಮಗಳು ಇಂದು ಗೋಚರಿಸುತ್ತವೆ

ಮತ್ತು ಇದು ನಾವು ಲಘುವಾಗಿ ತೆಗೆದುಕೊಳ್ಳುವ ಮಾನವ ಜೀವನದ ಬಹುಭಾಗವನ್ನು ವಿವರಿಸುತ್ತದೆ. ಈ ಕಾರಣದಿಂದ ಎಲ್ಲೆಡೆಯು  ಜನರಿಗೆ ತಮ್ಮ ಬಾಗಿಲುಗಳಿಗೆ ಬೀಗಗಳು, ಅವರಿಗೆ ಪೊಲೀಸರು, ವಕೀಲರು, ಬ್ಯಾಂಕಿಂಗ್‌ಗಾಗಿ ಗುಪ್ತಲಿಪಿ ಸಂಕೇತಪದಗಳು ಬೇಕಾಗುತ್ತವೆ – ಏಕೆಂದರೆ ನಮ್ಮ ಪ್ರಸ್ತುತ ಸ್ಥಿತಿಯಲ್ಲಿ ನಾವು ಪರಸ್ಪರ ಕದಿಯುತ್ತೇವೆ. ಅದಕ್ಕಾಗಿಯೇ ಸಾಮ್ರಾಜ್ಯಗಳು ಮತ್ತು ಸಮಾಜಗಳೆಲ್ಲವೂ ಅಂತಿಮವಾಗಿ ಕ್ಷಯಿಸುತ್ತವೆ ಮತ್ತು ಕುಸಿಯುತ್ತವೆ – ಏಕೆಂದರೆ ಈ ಎಲ್ಲಾ ಸಾಮ್ರಾಜ್ಯಗಳಲ್ಲಿನ ನಾಗರಿಕರು ಕ್ಷಯಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಎಲ್ಲಾ ರೀತಿಯ ಸರ್ಕಾರಿ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಪ್ರಯತ್ನಿಸಿದ ನಂತರ, ಮತ್ತು ಕೆಲವರು ಇತರರಿಗಿಂತ ಉತ್ತಮವಾಗಿ ಕೆಲಸಮಾಡಿದರೂ, ಪ್ರತಿಯೊಂದು ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯು ಅಂತಿಮವಾಗಿ ತನ್ನ ಮೇಲೆಯೇ ಕುಸಿಯುತ್ತದೆ ಎಂದು ತೋರುತ್ತದೆ – ಏಕೆಂದರೆ ಈ ಸಿದ್ಧಾಂತಗಳಲ್ಲಿ ವಾಸಿಸುವ ಜನರು ಅಂತಿಮವಾಗಿ ಇಡೀ ವ್ಯವಸ್ಥೆಯನ್ನು ಕೆಳಕ್ಕೆ ಎಳೆಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದಕ್ಕಾಗಿಯೇ ನಮ್ಮ ಪೀಳಿಗೆಯು ಅತಿ ಹೆಚ್ಚಾಗಿ  ವಿದ್ಯಾವಂತರಾಗಿದ್ದರೂ ಎಂದೂ ಅಸ್ತಿತ್ವದಲ್ಲಿಲ್ಲದ ಈ ಸಮಸ್ಯೆಗಳನ್ನು ನಾವು ಇನ್ನೂ ಹೊಂದಿದ್ದೇವೆ, ಏಕೆಂದರೆ ಇದು ನಮ್ಮ ಶಿಕ್ಷಣ ಮಟ್ಟಕ್ಕಿಂತ ಹೆಚ್ಚು ಆಳವಾಗಿ ಹೋಗುತ್ತದೆ. ಇದಕ್ಕಾಗಿಯೇ ನಾವು ಪ್ರತಾಸನ ಮಂತ್ರದ ಪ್ರಾರ್ಥನೆಯೊಂದಿಗೆ ಚೆನ್ನಾಗಿ ಗುರುತಿಸುತ್ತೇವೆ – ಏಕೆಂದರೆ ಅದು ನಮ್ಮ ಬಗ್ಗೆ ಚೆನ್ನಾಗಿ ವಿವರಿಸುತ್ತದೆ.

ಪಾಪ – ಗುರಿಯನ್ನು ತಪ್ಪುವದು

ಇದಕ್ಕಾಗಿಯೇ ಯಾವುದೇ ಧರ್ಮವು ಸಮಾಜದ ಬಗ್ಗೆ ತಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ತಂದಿಲ್ಲ – ನಾಸ್ತಿಕರೂ ಕೂಡ ಹೊಂದಿಲ್ಲ (ಸ್ಟಾಲಿನ್ನ ಸೋವಿಯತ್ ಒಕ್ಕೂಟ, ಮಾವೋರವರ ಚೀನಾ, ಪೋಲ್ ಪೋಟ್‌ನ ಕಾಂಬೋಡಿಯಾ ಬಗ್ಗೆ ಯೋಚಿಸಿ) – ಏಕೆಂದರೆ ನಾವು ಇರುವ ರೀತಿಯ ಬಗ್ಗೆ ಏನಾದರೂ ನಮ್ಮ ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಲು ಉದ್ದೇಶಿಸುತ್ತವೆ. ವಾಸ್ತವವಾಗಿ, ‘ತಪ್ಪುವ’ ಎಂಬ ಪದವು ನಮ್ಮ ಪರಿಸ್ಥಿತಿಯನ್ನು ಒಟ್ಟುಗೂಡಿಸುತ್ತದೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಚಿತ್ರವನ್ನು ಸತ್ಯವೇದದ ಒಂದು ವಾಕ್ಯವು ನೀಡುತ್ತದೆ. ಅದು ಹೇಳುವದೇನೆಂದರೆ

  16 ಈ ಸಮಸ್ತ ಜನರಲ್ಲಿ ಆದುಕೊಳ್ಳಲ್ಪಟ್ಟ ಏಳುನೂರು ಜನರು ಬಲಗೈ ಅಭ್ಯಾಸವಿಲ್ಲದವರಾಗಿ ದ್ದರು. ಅವರೆಲ್ಲರೂ ಒಂದು ಕೂದಲೆಳೆ ತಪ್ಪದ ಹಾಗೆ ಕವಣೆಯಿಂದ ಕಲ್ಲೆಸೆಯುವವರಾಗಿದ್ದರು.

ನ್ಯಾಯಸ್ಥಾಪಕರು 20:16

ಈ ವಾಕ್ಯವು ಕವೆಗೋಲುಗಳನ್ನು ಬಳಸುವಲ್ಲಿ ಪರಿಣತರಾಗಿದ್ದ ಸೈನಿಕರ ಬಗ್ಗೆ  ವಿವರಿಸುತ್ತದೆ ಮತ್ತು ಅವರು ಅದನ್ನು ಎಂದಿಗೂ ತಪ್ಪುವುದಿಲ್ಲ. ಮೇಲಿನ ‘ತಪ್ಪುವದು’ ಎಂಬ  ಇಬ್ರೀಯ ಪದದ ಭಾಷಾಂತರವು יַחֲטִֽא ׃. ಇದೇ ಇಬ್ರೀಯ ಪದವನ್ನು ಸತ್ಯವೇದಾದ್ಯಂತ  ಹೆಚ್ಚಾಗಿ ಪಾಪ ಎಂದು ಸಹ ಭಾಷಾಂತರಿಸಲಾಗಿದೆ. ಉದಾಹರಣೆಗೆ, ಇದೇ ಇಬ್ರೀಯ ಪದ ‘ಪಾಪ’ ಐಗುಪ್ತಕ್ಕೆ ಗುಲಾಮನಾಗಿ ಮಾರಲ್ಪಟ್ಟ ಯೋಸೇಫನು, ತನ್ನ ಯಜಮಾನನ ಹೆಂಡತಿಯು ವ್ಯಭಿಚಾರ ಮಾಡಲು ಬೇಡಿಕೊಂಡಾಗ್ಯೂ ಒಪ್ಪಿಕೊಳ್ಳಲಿಲ್ಲ. ಅವನು ಅವಳಿಗೆ:

  9 ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು.

ಆದಿಕಾಂಡ 39: 9

ಮತ್ತು ದಶಾಜ್ಞೆಗಳನ್ನು ನೀಡಿದ ನಂತರ ಅದು ಹೀಗೆ ಹೇಳುತ್ತದೆ:

  20 ಆಗ ಮೋಶೆಯು ಜನರಿಗೆ–ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು.

ವಿಮೋಚನಕಾಂಡ 20: 20

ಈ ಎರಡೂ ವಾಕ್ಯಗಳಲ್ಲಿ ಇದು ಒಂದೇ ಇಬ್ರೀಯ ಪದ יַחֲטִֽא ׃ ಅದನ್ನು ‘ಪಾಪ’ ಎಂದು ಭಾಷಾಂತರಿಸಲಾಗಿದೆ. ಸರಿಯಾಗಿ ಇದು ಸೈನಿಕರೊಂದಿಗಿನ ‘ತಪ್ಪುವದು’ ಎಂಬ ಒಂದೇ ಪದವಾಗಿದ್ದು, ಈ ವಾಕ್ಯಗಳಲ್ಲಿರುವಂತೆ ಗುರಿಗಳ ಮೇಲೆ ಕಲ್ಲುಗಳನ್ನು ಹೊಡೆಯುವುದು, ಅಂದರೆ ಜನರ ನಿರ್ವಹಣೆಯೊಂದಿಗೆ ಪರಸ್ಪರ ವ್ಯವಹರಿಸುವಾಗ ‘ಪಾಪ’ ಎಂದರ್ಥ. ‘ಪಾಪ’ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಚಿತ್ರವನ್ನು ಒದಗಿಸುತ್ತದೆ. ಸೈನಿಕನು ಕಲ್ಲನ್ನುತೆಗೆದುಕೊಂಡು ಗುರಿಯನ್ನು ಕವಣೆಯಿಂದ ಹೊಡೆಯುತ್ತಾನೆ. ಅದು ತಪ್ಪಿದರೆ ಅವನ ಉದ್ದೇಶವನ್ನು ವಿಫಲಗೊಳಿಸಿದೆ. ಅದೇ ರೀತಿ, ನಾವು ಆತನೊಂದಿಗೆ ಹೇಗೆ ಸಂಬಂಧ ಹೊಂದಿದ್ದೇವೆ ಮತ್ತು ಇತರರೊಟ್ಟಿಗೆ ನಾವು ಹೇಗೆ ನಡಕೊಳ್ಳುತ್ತೇವೆ ಎಂಬ ಗುರಿಯನ್ನು ಹೊಡೆಯಲು ನಾವು ದೇವರ ಸ್ವ ರೂಪದಲ್ಲಿ ಮಾಡಲ್ಪಟ್ಟಿದ್ದೇವೆ. ‘ಪಾಪ’ ಎಂದರೆ ಈ ಉದ್ದೇಶವನ್ನು, ಅಥವಾ ಗುರಿಯನ್ನು ತಪ್ಪುವುದು, ಅದು ನಮ್ಮ ಉದ್ದೇಶವಾಗಿತ್ತು, ಮತ್ತು ನಮ್ಮ ವಿವಿಧ ವ್ಯವಸ್ಥೆಗಳು, ಧರ್ಮಗಳು ಮತ್ತು ಸಿದ್ಧಾಂತಗಳಲ್ಲಿ ನಾವು ನಮಗಾಗಿ ಬಯಸುತ್ತೇವೆ.

ಪಾಪದ ಕೆಟ್ಟ ಸುದ್ದಿ – ಸತ್ಯದ ಸಮಸ್ಯೆ ಆದ್ಯತೆಯಲ್ಲ

ಮಾನವಕುಲದ ಈ ಭ್ರಷ್ಟ ಮತ್ತು ತಪ್ಪಿದ-ಗುರಿಯ ಚಿತ್ರವು ಸುಂದರವಾಗಿಲ್ಲ, ಅದು ಒಳ್ಳೆಯದಾಗಿ- ಅನಿಸುತ್ತಿಲ್ಲ, ಅಥವಾ ಆಶಾವಾದಿಯೂ ಅಲ್ಲ. ಹಲವು ವರ್ಷಗಳಿಂದ ನನಗೆ ತಿಳಿದ್ದಿದ್ದ ಜನರು ಈ ನಿರ್ದಿಷ್ಟ ಬೋಧನೆಯ ವಿರುದ್ಧ ಬಲವಾಗಿ ಪ್ರತಿಕ್ರಿಯಿಸಿದ್ದಾರೆ. ಕೆನಡಾದ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿಯು ನನ್ನನ್ನು ಬಹಳ ಕೋಪದಿಂದ ನೋಡುತ್ತಿರುವುದು, “ನಾನು ನಿಮ್ಮನ್ನು ನಂಬುವುದಿಲ್ಲ ಏಕೆಂದರೆ ನೀವು ಹೇಳುತ್ತಿರುವುದು ನನಗೆ ಇಷ್ಟವಿಲ್ಲ” ಎಂದು ಹೇಳುತ್ತಿರುವದು ನನಗೆ ನೆನಪಿದೆ. ಈಗ ನಾವು ಅದನ್ನು ಇಷ್ಟಪಡದಿರಬಹುದು, ಆದರೆ ಅದರ ಮೇಲೆ ಕೇಂದ್ರೀಕರಿಸುವ ಗುರಿಯನ್ನು ತಪ್ಪುವುದಾಗಿದೆ. ಏನನ್ನಾದರೂ ‘ಇಷ್ಟಪಡುವುದು’ ಅದು ನಿಜವೋ ಅಥವಾ ಇಲ್ಲವೋ ಎಂಬುದಕ್ಕೂ ಏನು ಸಂಬಂಧವಿದೆ? ನಾನು ತೆರಿಗೆಗಳು, ಯುದ್ಧಗಳು, ಏಡ್ಸ್ ಮತ್ತು ಭೂಕಂಪಗಳನ್ನು ಇಷ್ಟಪಡುವುದಿಲ್ಲ – ಯಾರಿಗೂ ಇಷ್ಟವಿಲ್ಲ – ಆದರೆ ಅದು ಅದನ್ನು ದೂರ ಹೋಗುವಂತೆ ಮಾಡುವುದಿಲ್ಲ, ಮತ್ತು ಅವುಗಳಲ್ಲಿ ಯಾವುದನ್ನೂ ನಾವು ನಿರ್ಲಕ್ಷಿಸಲಾಗುವುದಿಲ್ಲ.

ಪರಸ್ಪರ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಎಲ್ಲಾ ಸಮಾಜಗಳಲ್ಲಿ ನಿರ್ಮಿಸಿರುವ ಕಾನೂನು, ಪೊಲೀಸರು, ಬೀಗಗಳು, ಕೀಲಿಕೈಗಳು, ಭದ್ರತೆ ಇತ್ಯಾದಿ ಎಲ್ಲಾ ವ್ಯವಸ್ಥೆಗಳಲ್ಲಿ ಏನೋ ತಪ್ಪಾಗಿದೆ ಎಂದು ಸೂಚಿಸುತ್ತದೆ. ಕುಂಭಮೇಳದಂತಹ ಹಬ್ಬಗಳು ‘ನಮ್ಮ ಪಾಪಗಳನ್ನು ತೊಳೆಯುತ್ತವೆ’ ಎಂಬ ಅಂಶವು ಹತ್ತು ಲಕ್ಷ ಜನರನ್ನು ಸೆಳೆಯುತ್ತವೆ, ಸಹಜವಾಗಿ ಇದು ಕೆಲವು ರೀತಿಯಲ್ಲಿ ನಾವು ಗುರಿಯನ್ನು ‘ತಪ್ಪಿದ್ದೇವೆ’ ಎಂದು ತಿಳಿದಿರುವದನ್ನು ಸೂಚಿಸುತ್ತದೆ. ಸ್ವರ್ಗಕ್ಕೆ ಅವಶ್ಯಕತೆಯಾಗಿ ತ್ಯಾಗದ ಪರಿಕಲ್ಪನೆಯು ಎಲ್ಲಾ ಧರ್ಮಗಳಲ್ಲಿಯೂ ಕಂಡುಬರುತ್ತದೆ ಎಂಬ ಅಂಶವು ನಮ್ಮಲ್ಲೇನೋ ಸರಿಯಾಗಿಲ್ಲ ಎಂಬ ಸುಳಿವನ್ನು ನೀಡುತ್ತದೆ. ಕನಿಷ್ಠಪಕ್ಷದಲ್ಲಿ, ಈ ತತ್ವ ಸಿದ್ಧಾಂತವು ಇನ್ನೂ–  ಕೈಯಿಂದ ಪರಿಗಣಿಸಲು ಅರ್ಹವಾಗಿದೆ.

ಆದರೆ ಎಲ್ಲಾ ಧರ್ಮಗಳು, ಭಾಷೆಗಳು ಮತ್ತು ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ ಪಾಪದ ಈ ಸಿದ್ಧಾಂತವು – ನಾವೆಲ್ಲರೂ ಗುರಿಯನ್ನು ‘ತಪ್ಪಿಸಿಕೊಳ್ಳುವುದಕ್ಕೆ’ ಕಾರಣವಾಗುವುದು ಎಂಬ ಒಂದು ಪ್ರಮುಖ ಪ್ರಶ್ನೆಯನ್ನು ಎಬ್ಬಿಸುತ್ತದೆ. ದೇವರು ಅದರ ಬಗ್ಗೆ ಏನು ಮಾಡಲಿದ್ದಾನೆ? ನಮ್ಮ ಮುಂದಿನ ಸಂಚಿಕೆಯಲ್ಲಿ ದೇವರ ಪ್ರತಿಕ್ರಿಯೆಯನ್ನು ನೋಡುತ್ತೇವೆ – ಅಲ್ಲಿ ಮುಂಬರುವ ರಕ್ಷಕನ- ನಮಗಾಗಿ ಕಳುಹಿಸಲ್ಪಡುವ ಪುರುಷನ ಮೊದಲ ವಾಗ್ದಾನವನ್ನು ನೋಡುತ್ತೇವೆ.

Leave a Reply

Your email address will not be published. Required fields are marked *