ದಕ್ಷ ಯಜ್ಞ, ಯೇಸು ಮತ್ತು ‘ಕಳೆದು ಹೋದ’

ವಿವಿಧ ಬರಹಗಳು ದಕ್ಷ ಯಜ್ಞದ ಕಥೆಯನ್ನು ವಿವರಿಸುತ್ತವೆ ಆದರೆ ಅದರ ಸಾರಾಂಶವೇನೆಂದರೆ, ಶಿವನು ಆದಿ ಪರಾಶಕ್ತಿಯ ಅವತಾರವಾದ ದಕ್ಷಾಯನ/ಸತಿಯನ್ನು ಮದುವೆಯಾಗಿದ್ದನು, ಇದನ್ನು ಶಕ್ತಿ ಭಕ್ತರು ಶುದ್ಧ ಪ್ರಾಥಮಿಕ ಶಕ್ತಿ ಎಂದು ಪರಿಗಣಿಸಿದ್ದಾರೆ. (ಆದಿ ಪರಾಶಕ್ತಿಯನ್ನು ಪರಮ ಶಕ್ತಿ, ಆದಿ ಶಕ್ತಿ, ಮಹಾಶಕ್ತಿ, ಮಹಾದೇವಿ, ಮಹಾಗೌರಿ, ಮಹಾಕಾಳಿ, ಅಥವಾ ಸತ್ಯಂ ಶಕ್ತಿ ಎಂದು ಸಹಾ ಕರೆಯಲಾಗುತ್ತದೆ).

ಶಿವನ ಹೆಚ್ಚಿನ ತಪಸ್ವಿಗಳಿಂದಾಗಿ ದಕ್ಷಾಯನಳ ತಂದೆ, ದಕ್ಷ, ಶಿವನೊಂದಿಗಿನ ಮದುವೆಯನ್ನು ನಿರಾಕರಿಸಿದನು. ಆದ್ದರಿಂದ ದಕ್ಷನು ಯಜ್ಞದ ಆಚರಣೆಯನ್ನು ಮಾಡಿದಾಗ ಅವನು ತನ್ನ ಮಗಳು ಸತಿ ಮತ್ತು ಶಿವನನ್ನು ಹೊರತುಪಡಿಸಿ ಇಡೀ ಕುಟುಂಬವನ್ನು ಆಹ್ವಾನಿಸಿದನು. ಆದರೆ ಸತಿಯು,ಯಜ್ಞ ಸಮಾರಂಭದ ಬಗ್ಗೆ ತಿಳಿದದರಿಂದ ಹೋದಳು. ಆಕೆಯು ಪಾಲ್ಗೊಂಡದರಿಂದ ತಂದೆ ಕೋಪಗೊಂಡನು ಮತ್ತು ಅವಳು ಅಲ್ಲಿಂದ ಹೊರಟು ಹೋಗಲು ನಿರಂತರವಾಗಿ ಕೂಗಿದನು. ಪ್ರತಿಯಾಗಿ ಇದು ಸತಿಗೆ ಕೋಪವನ್ನುಂಟುಮಾಡಿತು, ಇದರಿಂದಾಗಿ ಅವಳು ತನ್ನ ಆದಿ ಪರಾಶಕ್ತಿ ರೂಪಕ್ಕೆ ಮರಳಿದಳು ಮತ್ತು ಅವಳ ಮರ್ತ್ಯ ದೇಹದ ರೂಪವಾದ ಸತಿಯನ್ನು ಯಜ್ಞದ ಬೆಂಕಿಯಲ್ಲಿ ಬಲಿಯಾಗಿಸಿದಳು, ಅದು ದಹಿಸುವ ಜ್ವಾಲೆಗಳಲ್ಲಿ ನೆಲಕ್ಕೆ ಕುಸಿಯಿತು.

ದಕ್ಷ ಯಜ್ಞದಲ್ಲಿ ನಷ್ಟವಾದದನ್ನುಅನ್ವೇಷಿಸುವುದು

ಸತಿಯ ಬಲಿಯು ಶಿವನನ್ನು ದುಃಖಕ್ಕೆ ತಳ್ಳಿಹಾಕಿತು. ಅವನು ತನ್ನ ಪ್ರೀತಿಯ ಸತಿಯನ್ನು ಕಳೆದುಕೊಂಡಿದ್ದನು. ಆದ್ದರಿಂದ ಶಿವನು ಭಯಾನಕ “ತಾಂಡವ”, ಅಥವಾ ವಿನಾಶದ ನೃತ್ಯವನ್ನು ನಿರೂಪಿಸಿದನು, ಮತ್ತು ಶಿವನು ಹೆಚ್ಚು ನೃತ್ಯ ಮಾಡಿದಂತೆ, ಹೆಚ್ಚು ವಿನಾಶವನ್ನುಂಟು ಮಾಡಿತು. ಮುಂದಿನ ದಿನಗಳಲ್ಲಿ ಅವನ ತಾಂಡವ ವ್ಯಾಪಕ ವಿನಾಶ ಮತ್ತು ಸಾವಿಗೆ ಕಾರಣವಾಯಿತು. ಅವನ ನಷ್ಟದಿಂದ ಉಂಟಾದ ದುಃಖ ಮತ್ತು ಕೋಪದ ಕಾರಣದ ಸಲುವಾಗಿ, ಶಿವನು ಸತಿಯ ದೇಹವನ್ನು ಹೊತ್ತುಕೊಂಡನು ಹಾಗೂ ಅದರೊಂದಿಗೆ ಬ್ರಹ್ಮಾಂಡದ ಸುತ್ತ ತಿರುಗಿದನು. ವಿಷ್ಣು ದೇಹವನ್ನು 51 ಭಾಗಗಳಾಗಿ ಕತ್ತರಿಸಿ ಅದು ಭೂಮಿಯ ಮೇಲೆ ಬಿದ್ದು ಶಕ್ತಿ ಪೀಠಗಳಿಗೆ ಪವಿತ್ರ ತಾಣಗಳಾಗಿ ಮಾರ್ಪಟ್ಟಿತು. ಇಂದು ಈ 51 ಪವಿತ್ರ ಸ್ಥಳಗಳು ವಿವಿಧ ಶಕ್ತಿ ದೇವಾಲಯಗಳಂತೆ, ಸತಿಯನ್ನು ಕಳೆದುಕೊಂಡಾಗ ಶಿವನು ಅನುಭವಿಸಿದ ನಷ್ಟವನ್ನು ಸ್ಮರಿಸುತ್ತವೆ.

ದೇವರುಗಳು ಮತ್ತು ದೇವತೆಗಳು ದಕ್ಷ ಯಜ್ಞದಲ್ಲಿ ಪರಸ್ಪರ ಸಾವನ್ನಪ್ಪಿದಾಗ ಅನುಭವಿಸುವ ನಷ್ಟವನ್ನು ನಾವು ಪ್ರಶಂಸಿಸುತ್ತೇವೆ. ಆದರೆ ನಾವೆಲ್ಲರೂ ಮರಣದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ನಷ್ಟದಲ್ಲಿ  ಹೋಗುತ್ತೇವೆ. ನೀವು ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡಾಗ ಏನು ಮಾಡುತ್ತೀರಿ? ನೀವು ನಿರಾಶೆಯಲ್ಲಿ ಬಿಟ್ಟುಬಿಡುತ್ತೀರಾ? ಕೋಪದಲ್ಲಿ ಹೊಡೆಯುವಿರೇ? ಅವರನ್ನು ಮರಳಿ ಪಡೆಯಲು ಪ್ರಯತ್ನಿಸುತ್ತೀರಾ?

ದೇವರ ಬಗ್ಗೆ ಏನು? ಆತನು ನಮ್ಮಲ್ಲಿ ಒಬ್ಬರು ಆತನ ರಾಜ್ಯಕ್ಕೆ ಕಳೆದುಹೋದಾಗ ಕಾಳಜಿ ವಹಿಸುತ್ತಾನೋ ಅಥವಾ ಗಮನಿಸುತ್ತಾನೋ?

ಯೇಸು ನಷ್ಟವಾದಬೆಳಕಿನ ಮೂಲಕ ಕಲಿಸುತ್ತಾನೆ

ದೇವರು ನಮ್ಮಲ್ಲಿ ಒಬ್ಬನನ್ನು ಕೂಡ ಕಳೆದುಕೊಂಡಾಗ ಹೇಗೆ ಭಾವಿಸುತ್ತಾನೆ ಮತ್ತು ಆತನು ಏನು ಮಾಡುತ್ತಾನೆಂದು ನಮಗೆ ತೋರಿಸಲು ಹಲವಾರು ಸಾಮ್ಯಗಳನ್ನು ಯೇಸು ಹೇಳಿದನು.

ಆತನ ಬೋಧನೆಗಳ ಬಲವನ್ನು ಅನುಭವಿಸಲು ಹೆಚ್ಚಾಗಿ ಪವಿತ್ರ ಜನರು ಪವಿತ್ರರಲ್ಲದವರಿಂದ ದೂರವಿರುತ್ತಾರೆ ಹಾಗೆ ಅಶುದ್ಧರಾಗುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದು ಯೇಸುವಿನ ಕಾಲದಲ್ಲಿನ ಧರ್ಮಶಾಸ್ತ್ರದ ಶಿಕ್ಷಕರ ವಿಷಯದಲ್ಲಿ ನಿಜವಾಗಿದೆ. ಆದರೆ ನಮ್ಮ ಪರಿಶುದ್ಧತೆ ಮತ್ತು ಸ್ವಚ್ಚತೆಯು ನಮ್ಮ ಹೃದಯದ ಅತ್ಯಂತ ಪ್ರಮುಖ  ವಿಷಯವಾಗಿದೆ ಎಂದು ಯೇಸು ಕಲಿಸಿದ್ದಾನೆ, ಮತ್ತು ಧಾರ್ಮಿಕವಾಗಿ ಶುದ್ಧವಾಗಿರದವರೊಂದಿಗೆ ಇರಲು ಸಕ್ರಿಯವಾಗಿ ಪ್ರಯತ್ನಿಸಿದನು. ಇಲ್ಲಿ ಹೇಗೆ ಅಶುದ್ಧರೊಂದಿಗಿನ ಆತನ ಒಡನಾಟ ಮತ್ತು ಧರ್ಮಶಾಸ್ತ್ರದ ಶಿಕ್ಷಕರ ಪ್ರತಿಕ್ರಿಯೆ ಎಂಬ ಎರಡು ಸಂಗತಿಗಳನ್ನ ಸುವಾರ್ತೆಯು ದಾಖಲಿಸುತ್ತದೆ.

​ಇದಾದ ಮೇಲೆ ಎಲ್ಲಾ ಸುಂಕದವರೂ ಪಾಪಿಗಳೂ ಉಪದೇಶವನ್ನು ಕೇಳುವದ ಕ್ಕಾಗಿ ಆತನ ಸವಿಾಪಕ್ಕೆ ಬಂದರು.
2 ಫರಿಸಾಯರು ಮತ್ತು ಶಾಸ್ತ್ರಿಗಳು–ಇವನು ಪಾಪಿಗಳನ್ನು ಅಂಗೀಕರಿಸಿ ಅವರೊಂದಿಗೆ ಊಟ ಮಾಡುತ್ತಾನೆ ಎಂದು ಹೇಳುತ್ತಾ ಗುಣುಗುಟ್ಟಿ

ದರು.ಲೂಕ 15: 1-2

ಯೇಸು ಪಾಪಿಗಳನ್ನ ಏಕೆ ಸ್ವಾಗತಿಸುತ್ತಾನೆ ಮತ್ತು ಅವರೊಂದಿಗೆ ತಿನ್ನುತ್ತಾನೆ? ಆತನು ಪಾಪವನ್ನು ಆನಂದಿಸಿದ್ದಾನೆಯೇ? ಯೇಸು ತನ್ನ ವಿಮರ್ಶಕರಿಗೆ ಮೂರು ಸಾಮ್ಯಗಳನ್ನು ಹೇಳುವ ಮೂಲಕ ಉತ್ತರಿಸಿದನು.

ಕಳೆದು ಹೋಗಿದ್ದ ಕುರಿಯ ಸಾಮ್ಯ

​3 ಆತನು ಅವರಿಗೆ ಈ ಸಾಮ್ಯವನ್ನು ಹೇಳಿ ದನು–

4 ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದು ಕೊಂಡರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ವರೆಗೆ ಅದನ್ನು ಹುಡುಕಿಕೊಂಡು ಹೋಗದಿರುವನೇ?

5 ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು.

6 ಆಮೇಲೆ ಅವನು ಮನೆಗೆ ಬಂದು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ–ನನ್ನ ಸಂಗಡ ಸಂತೋಷಪಡಿರಿ;ಯಾಕಂದರೆ ಕಳೆದುಹೋದ ನನ್ನ ಕುರಿಯನ್ನು ನಾನು ಕಂಡು ಕೊಂಡೆನು ಅನ್ನುವನು.

7 ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ದರು.ಲೂಕ 15: 3-7

ಈ ಕಥೆಯಲ್ಲಿ ಯೇಸು ಕುರುಬನಂತೆ ನಮ್ಮನ್ನು ಆತನೊಂದಿಗೆ ಕುರಿಗಳಿಗೆ ಹೋಲಿಸುತ್ತಾನೆ. ಕಳೆದುಹೋದ ಕುರಿಗಳನ್ನು ಹುಡುಕುವ ಯಾವುದೇ ಕುರುಬನಂತೆ, ಆತನು ಸ್ವತಃ ಕಳೆದುಹೋದ ಜನರನ್ನು ಹುಡುಕಲು ಹೊರಟನು. ಬಹುಶಃ ಕೆಲವು ಪಾಪಗಳು – ರಹಸ್ಯವೂ ಸಹ – ನಿಮ್ಮನ್ನು ಸಿಕ್ಕಿಹಾಕಿಸಲ್ಪಟ್ಟಿದೆ, ನೀವು ಕಳೆದುಹೋಗಲ್ಪಟ್ಟಂತೆ  ಮಾಡುತ್ತದೆ. ಅಥವಾ ಬಹುಶಃ ನಿಮ್ಮ ಜೀವನವು, ಅದರ ಎಲ್ಲಾ ಸಮಸ್ಯೆಗಳೊಂದಿಗೆ, ನೀವು ಕಳೆದುಹೋಗಲ್ಪಟ್ಟಂತೆ ಭಾವಿಸಲು ನಿಮ್ಮನ್ನು ಗೊಂದಲಕ್ಕೊಳಪಡಿಸುತ್ತದೆ. ಈ ಕಥೆಯು ಭರವಸೆಯನ್ನು ನೀಡುತ್ತದೆ ಏಕೆಂದರೆ ಯೇಸು ನಿಮ್ಮನ್ನು ಕಂಡು ಹಿಡಿಯಲು ನಿಮ್ಮನ್ನು ಹುಡುಕುತ್ತಿದ್ದಾನೆ ಎಂದು ನೀವು ತಿಳಿಯಬಹುದು. ಹಾನಿಯು ನಿಮ್ಮನ್ನು ನಾಶಮಾಡುವ ಮೊದಲು ಆತನು ನಿಮ್ಮನ್ನು ರಕ್ಷಿಸಲು ಬಯಸುತ್ತಾನೆ. ನೀವು ಕಳೆದುಹೋಗುವಾಗ ಆತನು ನಷ್ಟವನ್ನು ಅನುಭವಿಸುವ ಕಾರಣದಿಂದ ಹಾಗೆ ಆತನು ಮಾಡುತ್ತಾನೆ.

ನಂತರ ಆತನು ಎರಡನೇ ಕಥೆಯನ್ನು ಹೇಳಿದನು.

ಕಳೆದು ಹೋಗಿದ್ದ ಪಾವಲಿಯ ಸಾಮ್ಯ

8 ಯಾವ ಸ್ತ್ರೀಯು ತನ್ನಲ್ಲಿ ಹತ್ತು ಬೆಳ್ಳಿಯ ನಾಣ್ಯಗಳಿರಲಾಗಿ ಒಂದು ನಾಣ್ಯವನ್ನು ಕಳೆದುಕೊಂಡರೆ ದೀಪಹಚ್ಚಿ ಮನೆಯನ್ನು ಗುಡಿಸಿ ಅವಳು ಅದನ್ನು ಕಂಡುಕೊಳ್ಳುವ ವರೆಗೆ ಜಾಗ್ರತೆಯಿಂದ ಹುಡುಕುವ ದಿಲ್ಲವೇ?
9 ಅವಳು ಅದನ್ನು ಕಂಡುಕೊಂಡ ಮೇಲೆ ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ–ನನ್ನ ಸಂಗಡ ಸಂತೋಷಪಡಿರಿ; ಯಾಕಂ ದರೆ ನಾನು ಕಳಕೊಂಡಿದ್ದ ನಾಣ್ಯವನ್ನು ಕಂಡುಕೊಂಡೆನು ಅನ್ನುವಳು.
10 ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಲೂಕ 15: 8-10

ನಾವು ಈ ಕಥೆಯಲ್ಲಿ ಅಮೂಲ್ಯವಾದ ಆದರೆ ಕಳೆದುಹೋಗಿದ್ದ ಪಾವಲಿಯಾಗಿದ್ದೇವೆ ಮತ್ತು ಆತನೇ ಅದನ್ನು ಹುಡುಕುವವನು ಆಗಿದ್ದಾನೆ. ಪಾವಲಿಯು ಕಳೆದುಹೋದರೂ ಅದು ಕಳೆದುಹೋಗಿದೆ ಎಂದು ಅದಕ್ಕೆ‘ತಿಳಿದಿರುವದಿಲ್ಲ’. ಅದು ನಷ್ಟವನ್ನು ಅನುಭವಿಸುವುದಿಲ್ಲ. ಇಲ್ಲಿ ನಷ್ಟದ ಪ್ರಜ್ಞೆಯನ್ನು ಹೊತ್ತುಕೊಳ್ಳುವುದು ಮಹಿಳೆಯಾಗಿದ್ದಾಳೆ ಮತ್ತು ಆದ್ದರಿಂದ ಅವಳು ಬಹಳ ಎಚ್ಚರಿಕೆಯಿಂದ ಮನೆಯ ನೆಲವನ್ನು ಗುಡಿಸುತ್ತಾಳೆ ಎಲ್ಲದರ ಕೆಳಗೆ ಮತ್ತು ಹಿಂದೆ ನೋಡುತ್ತಾಳೆ, ಆ ಅಮೂಲ್ಯವಾದ ಪಾವಲಿಯನ್ನು ಕಂಡುಕೊಳ್ಳುವವರೆಗೂ ಅವಳು ತೃಪ್ತಿಯನ್ನು ಹೊಂದಲಿಲ್ಲ. ಬಹುಶಃ ನೀವು ಕಳೆದುಹೋದಂತೆ ‘ಭಾವಿಸುವುದಿಲ್ಲ’ . ಆದರೆ ಸತ್ಯವೆಂದರೆ ನಾವೆಲ್ಲರೂ, ನಾವು ಅದನ್ನು ಅನುಭವಿಸುತ್ತೇವೆಯೋ ಅಥವಾ ಇಲ್ಲವೋ. ಯೇಸುವಿನ ದೃಷ್ಟಿಯಲ್ಲಿ ನೀವು ಅಮೂಲ್ಯವಾದವರು ಆದರೆ ಕಳೆದುಹೋದ ಪಾವಲಿಯೂ ಆಗಿರುವಿರಿ ಮತ್ತು ಆತನು ನಷ್ಟವನ್ನು ಅನುಭವಿಸುತ್ತಾನೆ ಆದ್ದರಿಂದ ಆತನು ನಿಮ್ಮನ್ನು ಹುಡುಕುತ್ತಾನೆ ಮತ್ತು ನಿಮ್ಮನ್ನು ಕಂಡು ಹಿಡಿಯಲು ಕಾರ್ಯ ನಿರ್ವಹಿಸುತ್ತಾನೆ.

ಆತನ ಮೂರನೆಯ ಕಥೆಯು ಅತ್ಯಂತ ಪ್ರಸಿದ್ಧವಾಗಿದೆ.

ತಪ್ಪಿ ಹೋದ ಮಗನ ಸಾಮ್ಯ

11 ಆತನು–ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಕುಮಾರರಿದ್ದರು.
12 ಅವರಲ್ಲಿ ಕಿರಿಯವನು ತನ್ನ ತಂದೆಗೆ–ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಅಂದನು; ಆಗ ಅವನು ತನ್ನ ಬದುಕನ್ನು ಅವರಿಗೆ ವಿಭಾಗಿಸಿದನು.
13 ಕೆಲವೇ ದಿನಗಳಲ್ಲಿ ಕಿರೀ ಮಗನು ಎಲ್ಲವನ್ನೂ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿ ಅಲ್ಲಿ ದುಂದುಗಾರನಾಗಿ ಜೀವಿಸಿ ತನ್ನ ಆಸ್ತಿಯನ್ನು ಹಾಳುಮಾಡಿಬಿಟ್ಟನು.
14 ಅವನು ಎಲ್ಲವನ್ನು ವೆಚ್ಚ ಮಾಡಿದ ಮೇಲೆ ಆ ದೇಶದಲ್ಲಿ ಘೋರವಾದ ಬರ ಉಂಟಾಯಿತು. ಹೀಗೆ ಅವನು ಕೊರತೆ ಪಡಲಾರಂಭಿಸಿದನು.
15 ಆಗ ಅವನು ಹೋಗಿ ಆ ದೇಶದ ನಿವಾಸಿಯಾಗಿದ್ದವನೊಂದಿಗೆ ಸೇರಿ ಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸು ವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ
16 ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.
17 ಅವನಿಗೆ ಬುದ್ದಿ ಬಂದಾಗ ಅವನು–ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.
18 ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ–ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ;
19 ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಅನ್ನುವೆನು ಎಂದು ಅಂದುಕೊಂಡು
20 ಎದ್ದು ತನ್ನ ತಂದೆಯ ಬಳಿಗೆ ಬಂದನು. ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.
21 ಮಗನು ಅವನಿಗೆ–ಅಪ್ಪಾ, ನಾನು ಪರಲೋಕಕ್ಕೆ ವಿರೋಧ ವಾಗಿಯೂ ನಿನ್ನ ದೃಷ್ಟಿಯಲ್ಲಿಯೂ ಪಾಪ ಮಾಡಿದ್ದೇನೆ; ನಿನ್ನ ಮಗನೆನಿಸಿಕೊಳ್ಳುವದಕ್ಕೆ ಇನ್ನೆಂದಿಗೂ ನಾನು ಯೋಗ್ಯನಲ್ಲ ಅಂದನು.
22 ಆದರೆ ತಂದೆಯು ತನ್ನ ಸೇವಕರಿಗೆ–ಶ್ರೇಷ್ಠವಾದ ನಿಲುವಂಗಿಯನ್ನು ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನೂ ಪಾದಗಳಿಗೆ ಕೆರಗಳನ್ನೂ ಹಾಕಿರಿ;
23 ಇದಲ್ಲದೆ ಕೊಬ್ಬಿದ ಆ ಕರುವನ್ನು ಇಲ್ಲಿ ತಂದು ವಧಿಸಿರಿ; ನಾವು ಉಂಡು ಸಂತೋಷಪಡೋಣ;
24 ಯಾಕಂದರೆ ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋಗಿದ್ದನು, ಈಗ ಸಿಕ್ಕಿದ್ದಾನೆ ಎಂದು ಹೇಳಿದನು; ಹೀಗೆ ಅವರು ಸಂತೋಷ ಪಡಲಾರಂಭಿಸಿದರು.
25 ಆಗ ಹಿರೀಮಗನು ಹೊಲದಲ್ಲಿದ್ದನು; ಅವನು ಮನೆಯ ಸವಿಾಪಕ್ಕೆ ಬರುತ್ತಿದ್ದಾಗ ವಾದ್ಯವನ್ನೂ ನಾಟ್ಯವನ್ನೂ ಕೇಳಿಸಿಕೊಂಡನು.
26 ಅವನು ಸೇವಕರಲ್ಲಿ ಒಬ್ಬನನ್ನು ಕರೆದು ಇವುಗಳು ಏನೆಂದು ಕೇಳಿದನು.
27 ಆ ಸೇವಕನು ಅವನಿಗೆ–ನಿನ್ನ ತಮ್ಮನು ಬಂದಿದ್ದಾನೆ; ನಿನ್ನ ತಂದೆಯು ಅವನನ್ನು ಸುರಕ್ಷಿತವಾಗಿ ಸೌಖ್ಯದಲ್ಲಿ ಸ್ವೀಕರಿಸಿದ್ದರಿಂದ ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ ಅಂದನು.
28 ಅದಕ್ಕೆ ಅವನು ಕೋಪಗೊಂಡು ಒಳಗೆ ಹೋಗಲೊಲ್ಲದೆ ಇದ್ದನು. ಆದಕಾರಣ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿ ಕೊಂಡನು.
29 ಆದರೆ ಅವನು ಪ್ರತ್ಯುತ್ತರವಾಗಿ ತನ್ನ ತಂದೆಗೆ–ಇಗೋ, ಇಷ್ಟು ವರುಷಗಳ ವರೆಗೆ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ, ನಾನು ನಿನ್ನ ಅಪ್ಪಣೆ ಯನ್ನು ಎಂದಾದರೂ ವಿಾರಲಿಲ್ಲ; ಆದಾಗ್ಯೂ ನಾನು ನನ್ನ ಸ್ನೇಹಿತರೊಂದಿಗೆ ಸಂತೋಷಪಡುವದಕ್ಕಾಗಿ ನೀನ
30 ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.
31 ಆಗ ಅವನು–ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ನನಗಿರುವ ದೆಲ್ಲವೂ ನಿನ್ನದೇ.
32 ಆದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋದ ವನಾಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಸಂತೋ ಷಿಸಿ ಆನಂದಪಡುವದು ಯುಕ್ತವಾದದ್ದೇ ಎಂದು ಹೇಳಿದನು ಅಂದನು.

ಲೂಕ 15: 11-32

ಈ ಕಥೆಯಲ್ಲಿ ನಾವು ಹಿರಿಯ, ಧಾರ್ಮಿಕ ಮಗ, ಅಥವಾ ದೂರ ಹೋಗಿರುವ ಕಿರಿಯ ಮಗನಾಗಿರಬಹುದು. ಹಿರಿಯ ಮಗನು ಎಲ್ಲಾ ಧಾರ್ಮಿಕ ಪೂಜೆಗಳನ್ನು ಗಮನಿಸಿದವನಾಗಿದ್ದರೂ, ತನ್ನ ತಂದೆಯ ಪ್ರೀತಿಯ ಹೃದಯವನ್ನು ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ. ಕಿರಿಯ ಮಗನು ಮನೆಯಿಂದ ಹೊರಹೋಗುವ ಮೂಲಕ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದಾನೆಂದು ಭಾವಿಸಿದ್ದರೂ  ಹಸಿವಿನಿಂದ ಮತ್ತು ಅವಮಾನದಲ್ಲಿ ಗುಲಾಮನಾಗಿದ್ದನ್ನು ಕಂಡುಕೊಂಡನು. ನಂತರ ಅವನು ‘ತನ್ನ ಪ್ರಜ್ಞೆಗೆ ಬಂದನು’, ತನ್ನ ಮನೆಗೆ ಹಿಂತಿರುಗಬಹುದೆಂದು ಅರಿತುಕೊಂಡನು. ಹಿಂತಿರುಗಿ ಹೋಗುವದು ಬಹಿರಂಗಪಡಿಸುವದೇನೆಂದರೆ ಅವನು ಮೊದಲಿಗೆ ಹೊರಟ್ಟದ್ದು ತಪ್ಪಾಗಿತ್ತು, ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ರತೆ ಬೇಕಾಗುತ್ತದೆ. ಇದು ಸ್ವಾಮಿ ಯೋಹಾನನು ಕಲಿಸಿದ ‘ಪಶ್ಚಾತ್ತಾಪ’ ಎಂದರೆ ಏನು ಎಂಬುದನ್ನು ವಿವರಿಸುತ್ತದೆ.

ಅವನು ತನ್ನ ಹೆಮ್ಮೆಯನ್ನು ತೆಗೆದು ಹಾಕಿ ತನ್ನ ತಂದೆಯ ಬಳಿಗೆ ಹಿಂದಿರುಗಿದಾಗ ಅವನು ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ  ಅವನಲ್ಲಿರುವ ಪ್ರೀತಿ ಮತ್ತು ಅವನಿಗಿರುವ ಸ್ವೀಕಾರವನ್ನು ಕಂಡುಕೊಂಡನು. ಕಾಲಿಗೆ ಜೋಡು, ಶ್ರೇಷ್ಟವಾದ ನಿಲುವಂಗಿ, ಉಂಗುರ, ಹಬ್ಬ, ಆಶೀರ್ವಾದ, ಸ್ವೀಕಾರ – ಇವೆಲ್ಲವೂ ಪ್ರೀತಿಯನ್ನು ಸ್ವಾಗತಿಸುವ ಬಗ್ಗೆ ಮಾತನಾಡುತ್ತವೆ. ಇದು ದೇವರು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ, ನಾವು ಆತನ ಬಳಿಗೆ ಮರಳಬೇಕೆಂದು ಬಯಸುತ್ತಾನೆ ಎಂದು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.  ಅದಕ್ಕೆ ನಾವು ‘ಪಶ್ಚಾತ್ತಾಪ’ ಪಡಬೇಕಾದ ಆಗತ್ಯವಿದೆ ಆದರೆ ನಾವು ಹಾಗೆ ಮಾಡುವಾಗ ನಮ್ಮನ್ನು ಸ್ವೀಕರಿಸಲು ಆತನು ಸಿದ್ಧನಾಗಿರುವದನ್ನು ಕಾಣುವೆವು.

ನಾವು ಶಿವ ಮತ್ತು ಆದಿ ಪರಾಶಕ್ತಿಯ ಶಕ್ತಿ ಬಲದಿಂದಲೂ ಸಾವಿನ ಪ್ರತ್ಯೇಕತೆಯನ್ನು ಜಯಿಸಲು ಸಾಧ್ಯವಾಗಲಿಲ್ಲ ಎಂದು ದಕ್ಷ ಯಜ್ಞದಲ್ಲಿ ನೋಡುತ್ತೇವೆ. ಸೀತೆಯ 51 ಶಕ್ತಿ, ಚದುರಿದ ದೇಹದ ಭಾಗಗಳು ಇಂದಿಗೂ ಈ ಸಂಗತಿಗೆ ಸಾಕ್ಷಿಯಾಗಿದೆ. ಇದು ಅಂತಿಮವಾಗಿ ‘ಕಳೆದುಹೋದ’ ಚಿತ್ರಣವನ್ನು ವಿವರಿಸುತ್ತದೆ. ಇದು ಯೇಸು ‘ಕಳೆದುಹೋದ’ ನಮ್ಮನ್ನು ರಕ್ಷಿಸಲು ಬಂದ ರೀತಿಯನ್ನು ತಿಳಿಸುತ್ತದೆ. ಆತನು ಆ ಅಂತಿಮ ಶತ್ರುವನ್ನು- ಸಾವನ್ನು ಎದುರಿಸಿದ್ದಂತೆ ನಾವು ಇದನ್ನು ನೋಡುತ್ತೇವೆ.

Leave a Reply

Your email address will not be published. Required fields are marked *