ಬ್ರಹ್ಮ ಮತ್ತು ಆತ್ಮನನ್ನು ಅರ್ಥಮಾಡಿಕೊಳ್ಳಲು ವಾಕ್ಯದ ಅವತಾರ.

ಭಗವಂತ ಬ್ರಹ್ಮ ಎಂಬುದು ಬ್ರಹ್ಮಾಂಡದ ಸೃಷ್ಟಿಕರ್ತನನ್ನು ಗುರುತಿಸುವ ಸಾಮಾನ್ಯವಾದ  ಹೆಸರು. ಸಾಮಾನ್ಯವಾಗಿ ಪ್ರಜಾಪತಿಯನ್ನು ಪ್ರಾಚೀನ ಋಗ್ವೇದದಲ್ಲಿ (ಕ್ರಿ.ಪೂ 1500) ಸೃಷ್ಟಿಕರ್ತನಿಗೆ ಬಳಸಲಾಗುತ್ತಿತ್ತು ಆದರೆ ಪುರಾಣಗಳಲ್ಲಿ ಇದನ್ನು ಭಗವಂತ ಬ್ರಹ್ಮನಿಗೆ ಬದಲಾಯಿಸಲಾಯಿತು. ಇಂದಿನ ಬಳಕೆಯಲ್ಲಿ, ಭಗವಂತ ಬ್ರಹ್ಮ, ಸೃಷ್ಟಿಕರ್ತನಾಗಿ, ವಿಷ್ಣು, (ಸಂರಕ್ಷಕ) ಮತ್ತು ಶಿವನ (ವಿನಾಶಕ) ಜೊತೆಗೆ ದೈವಿಕ ತ್ರಿಮೂರ್ತಿಯ (ತ್ರಿಯೇಕ ದೇವರು) ಮೂರು ಅಂಶಗಳಲ್ಲಿ ಒಬ್ಬರಾಗಿದ್ದಾರೆ.  ಈಸ್ವರ (ಈಶ್ವರ) ಬ್ರಹ್ಮನೊಂದಿಗೆ ಸಮಾನಾರ್ಥಕವಾಗಿದೆ, ಹಾಗೆಯೇ ಇದು ಸೃಷ್ಟಿಗೆ ಕಾರಣನಾದ ಉನ್ನತ ಆತ್ಮನನ್ನು ಸಹಾ ಸೂಚಿಸುತ್ತದೆ.

ಇದು ಬ್ರಹ್ಮನನ್ನು ಅರ್ಥಮಾಡಿಕೊಳ್ಳುವುದು ಪ್ರಾಥಮಿಕ ಗುರಿಯಾಗಿದ್ದರೂ, ಪ್ರಾಯೋಗಿಕವಾಗಿ ಇದು ಅಸ್ಪಷ್ಟವಾಗಿದೆ. ಭಕ್ತಿ ಮತ್ತು ಪೂಜೆಗಳ ವಿಷಯದಲ್ಲಿ, ಶಿವ ಮತ್ತು ವಿಷ್ಣು, ಅವರ ಪತ್ನಿ ಮತ್ತು ಅವತಾರಗಳೊಂದಿಗೆ ಭಗವಂತ ಬ್ರಹ್ಮನಿಗಿಂತ ಹೆಚ್ಚಿನ ಗಮನವನ್ನು ಪಡೆಯುತ್ತಾರೆ. ತ್ವರಿತವಾಗಿ ನಾವು ಶಿವ ಮತ್ತು ವಿಷ್ಣುವಿಗೆ ಅವತಾರ ಮತ್ತು ಪತ್ನಿಗಳನ್ನು ಹೆಸರಿಸಬಹುದು, ಆದರೆ ಬ್ರಹ್ಮನಿಗೆ ನಾವು ತಡಕಾಡುತ್ತೇವೆ.

ಏಕೆ?

ಬ್ರಹ್ಮ, ಬ್ರಹ್ಮನು ಅಥವಾ ಈಶ್ವರ, ಸೃಷ್ಟಿಕರ್ತನಾಗಿದ್ದರೂ, ಪಾಪಗಳು, ಕತ್ತಲೆ ಮತ್ತು ತಾತ್ಕಾಲಿಕತೆಯ ಬಾಂಧವ್ಯದಿಂದ ಹೋರಾಡುವ ನಮ್ಮಿಂದ ದೂರವಾಗಿದ್ದಾರೆ ಮತ್ತು ಪ್ರವೇಶಿಸಲಾಗುವುದಿಲ್ಲ ಎಂದು ತೋರುತ್ತದೆ. ಬ್ರಹ್ಮನು ಎಲ್ಲವುಗಳ  ಮೂಲವಾಗಿದ್ದರೂ, ಮತ್ತು ನಾವು ಈ ಮೂಲಕ್ಕೆ ಹಿಂತಿರುಗಬೇಕಾದರೂ, ಈ ದೈವಿಕ ತತ್ವವನ್ನು ಗ್ರಹಿಸಲು ನಮ್ಮ ಸಾಮರ್ಥ್ಯದಿಂದ  ತಲುಪಲಾಗುವುದಿಲ್ಲ. ಆದ್ದರಿಂದ ನಾವು ಸಾಮಾನ್ಯವಾಗಿ ನಮ್ಮ ಭಕ್ತಿಯನ್ನು ಹೆಚ್ಚು ಮಾನವೀಯವಾಗಿ ಕಾಣುವ, ನಮಗೆ ಹತ್ತಿರವಿರುವ, ಮತ್ತು ನಮಗೆ ಪ್ರತಿಕ್ರಿಯಿಸುವ ದೇವತೆಗಳ ಮೇಲೆ ಕೇಂದ್ರೀಕರಿಸುತ್ತೇವೆ. ನಾವು ಬ್ರಹ್ಮನ ಸ್ವಭಾವವನ್ನು ದೂರದಿಂದ ಊಹಿಸುತ್ತೇವೆ. ಪ್ರಾಯೋಗಿಕವಾಗಿ, ಬ್ರಹ್ಮ ಅಪರಿಚಿತ ದೇವರು, ಬ್ರಹ್ಮ ಪ್ರತಿಮೆಗಳು ತುಲನಾತ್ಮಕವಾಗಿ ಅಪರೂಪವಾಗಿದೆ.

ಆ ಊಹೆಯ ಒಂದು ಭಾಗವು (ಆತ್ಮನು) ದೈವಿಕ (ಬ್ರಹ್ಮನು) ಜೊತೆಗಿನ ಆತ್ಮದ ಸಂಬಂಧದ ಸುತ್ತ ಸುತ್ತುತ್ತದೆ. ಈ ಪ್ರಶ್ನೆಯ ಮೇಲೆ ವಿವಿಧ ಋಷಿಗಳು ವಿಭಿನ್ನ ಚಿಂತನೆಯ ಶಾಲೆಗಳನ್ನು ಬೆಳೆಸಿದ್ದಾರೆ. ಈ ಅರ್ಥದಲ್ಲಿ, ಮನಃಶಾಸ್ತ್ರದ ಅಧ್ಯಯನ, ನಮ್ಮ ಆತ್ಮ ಅಥವಾ ಆತ್ಮನು ಧರ್ಮಶಾಸ್ತ್ರಕ್ಕೆ ಸಂಬಂಧಿಸಿದೆ, ದೇವರ ಅಥವಾ ಬ್ರಹ್ಮನ ಅಧ್ಯಯನ. ವೈವಿಧ್ಯಮಯ ಚಿಂತನೆ ಅಸ್ತಿತ್ವದಲ್ಲಿದ್ದರೂ, ನಾವು ದೇವರನ್ನು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲದ ಕಾರಣ, ಮತ್ತು ದೇವರು ದೂರವಿರುವುದರಿಂದ, ತತ್ವಶಾಸ್ರಗಳ  ಬುದ್ಧಿವಂತರು ಹೆಚ್ಚಾಗಿ ಕತ್ತಲೆಯಲ್ಲಿ ತಡಕಾಡುತ್ತಾರೆ.

ಈ ಅಸಮರ್ಥತೆಯನ್ನು ದೂರದ ದೈವಿಕ ಸೃಷ್ಟಿಕರ್ತನೊಂದಿಗೆ ಸಂಪರ್ಕಿಸಲು ವಿಶಾಲ ಪ್ರಾಚೀನ ಜಗತ್ತಿನಲ್ಲಿ ಗುರುತಿಸಲಾಗಿದೆ. ಪ್ರಾಚೀನ ಗ್ರೀಕರು ಜಗತ್ತು ಬಂದ ತತ್ವ ಅಥವಾ ಕಾರಣವನ್ನು ವಿವರಿಸಲು ವಾಕ್ಯ ಎಂಬ ಪದವನ್ನು ಬಳಸಿದರು ಮತ್ತು ಅವರ ಬರಹಗಳು ವಾಕ್ಯವನ್ನು ಚರ್ಚಿಸಿದವು. ತರ್ಕ ಎಂಬ ಪದವು ವಾಕ್ಯದಿಂದ ಬಂದಿದೆ, ಮತ್ತು ವಾಕ್ಯದಿಂದ ಹುಟ್ಟಿಕೊಂಡಿರುವ ಪ್ರತ್ಯಯಶಾಸ್ತ್ರದ ಎಲ್ಲಾ ಅಧ್ಯಯನಗಳು (ಉದಾ. ಧರ್ಮಶಾಸ್ತ್ರ, ಮನಃಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ). ವಾಕ್ಯಗಳು ಬ್ರಹ್ಮ ಅಥವಾ ಬ್ರಹ್ಮನಿಗೆ ಸಮಾನವಾಗಿದೆ.

ಇಬ್ರೀಯ ವೇದಗಳು ಇಬ್ರೀಯರೊಂದಿಗೆ (ಅಥವಾ ಯಹೂದಿಗಳೊಂದಿಗೆ) ತಮ್ಮ ರಾಷ್ಟ್ರದ ಪೂರ್ವಜ, ಶ್ರೀ ಅಬ್ರಹಾಮನಿಂದ, ಪ್ರಾರಂಭಿಸಿ ದಶಾಜ್ಞೆಗಳನ್ನು ಪಡೆದ ಶ್ರೀ ಮೋಶೆಗೆ ಸೃಷ್ಟಿಕರ್ತನ ವ್ಯವಹಾರವನ್ನು ವಿವರಿಸುತ್ತದೆ. ಇಬ್ರೀಯರು ಅವರ ಇತಿಹಾಸದಲ್ಲಿ, ನಮ್ಮಂತೆಯೇ, ಸೃಷ್ಟಿಕರ್ತನನ್ನು ಅವರಿಂದ ತೆಗೆದುಹಾಕಲಾಗಿದೆ ಎಂದು ಭಾವಿಸಿದರು, ಮತ್ತು ಹತ್ತಿರ ಮತ್ತು ಹೆಚ್ಚು ವೈಯಕ್ತಿಕವೆಂದು ತೋರುವ ಇತರ ದೇವತೆಗಳನ್ನು ಪೂಜಿಸಲು ಆಕರ್ಷಿತರಾದರು ಎಂದು ಕಾಣುತ್ತದೆ. ಆದ್ದರಿಂದ ಹೆಚ್ಚಾಗಿ ಇಬ್ರೀಯ ವೇದಗಳು ಸೃಷ್ಟಿಕರ್ತನನ್ನು ಈ ಇತರ ದೇವರುಗಳಿಂದ ಪ್ರತ್ಯೇಕಿಸಲು ಪರಾತ್ಪರದೇವರು  ಎಂದು ಕರೆಯುತ್ತವೆ. ಕ್ರಿ.ಪೂ 700 ರ ಸುಮಾರಿಗೆ ಭಾರತಕ್ಕೆ ಗಡಿಪಾರಾಗಿ ಬರುವ ಇಸ್ರಾಯೇಲ್ಯರು ಪ್ರಜಾಪತಿ ಬ್ರಹ್ಮ ಪರಿವರ್ತನೆಗೆ ಅನುಕೂಲ ಮಾಡಿಕೊಟ್ಟರು ಎಂದು ನಾವು ಊಹಿಸಿದ್ದೇವೆ, ಏಕೆಂದರೆ ಈ ದೇವರನ್ನು ಅವರ ಪೂರ್ವಜ,  ಅಬ್ರಹಾಂ,  ಸೂಚಿಸಿದ್ದಾನೆ ಮತ್ತು ಅವನೊಂದಿಗೆ ಸಹಾಯಕ ದೇವರು (ಅ)ಬ್ರಹಾಮ ಆದನು.

ನಮ್ಮ ಜ್ಞಾನೇಂದ್ರಿಯಗಳಿಂದ ಬ್ರಹ್ಮನನ್ನು ನೋಡಲು, ಅಥವಾ ನಮ್ಮ ಆತ್ಮನ ಸ್ವಭಾವವನ್ನು ಅರಿಯಲು ಸಾಧ್ಯವಿಲ್ಲದ ಕಾರಣ, ನಮ್ಮ ಮನಸ್ಸಿನಿಂದ ದೇವರಾದ ಬ್ರಹ್ಮನನ್ನು ನೋಡೋಣ, ಖಚಿತವಾದ ಜ್ಞಾನವನ್ನು ಪಡೆಯುವ ಏಕೈಕ ಮಾರ್ಗವೆಂದರೆ ಬ್ರಹ್ಮನು ತನ್ನನ್ನು ತಾನೇ ನಮಗೆ ಬಹಿರಂಗಪಡಿಸುವುದು.

ಸುವಾರ್ತೆಗಳು ಯೇಸುವನ್ನು (ಯೇಸುವಿನ ಪ್ರತಿಬಿಂಬ) ಸೃಷ್ಟಿಕರ್ತ ಅಥವಾ ಪರಾತ್ಪರದೇವರು, ಬ್ರಹ್ಮನು ಅಥವಾ ವಾಕ್ಯವೇ ಈ ಅವತಾರವೆಂದು ಪ್ರಸ್ತುತಪಡಿಸುತ್ತವೆ. ಎಲ್ಲಾ ಜನರು ಸಮಯದ ಮೂಲಕ ಮತ್ತು ಸಂಸ್ಕೃತಿಗಳಾದ್ಯಂತ ಅನುಭವಿಸಿದ ಈ ಮಿತಿಗಳಿಂದಾಗಿ ಆತನು ನಿಖರವಾಗಿ ನಮ್ಮ ಜಗತ್ತಿಗೆ ಬಂದನು. ಈ ರೀತಿ ಯೋಹಾನನ ಸುವಾರ್ತೆಯು ಯೇಸುವನ್ನು ಪರಿಚಯಿಸುತ್ತದೆ. ನಾವು ವಾಕ್ಯವನ್ನು ಎಲ್ಲಿ ಓದುತ್ತೇವೆಂದರೆ ಮೂಲ ಗ್ರೀಕ್ ಪಠ್ಯದಿಂದ ಅನುವಾದಿಸಲಾದ ಅದೇ ವಾಕ್ಯ. ವಚನ/ವಾಕ್ಯ  ಬಳಸಲಾಗುತ್ತಿದ್ದದರಿಂದ ರಾಷ್ಟ್ರೀಯ ದೇವತೆಯನ್ನು ಚರ್ಚಿಸಲಾಗುತ್ತಿರಲ್ಲಿಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ, ಆದರೆ  ತತ್ವ ಅಥವಾ ಕಾರಣದಿಂದ ಎಲ್ಲವು ಬಂದಿದೆ. ನೀವು ವಾಕ್ಯವು ಕಾಣಿಸಿಕೊಂಡಲ್ಲೆಲ್ಲಾ ಬ್ರಹ್ಮನನ್ನು ಬದಲಿಸಬಹುದು ಮತ್ತು ಈ ಪಠ್ಯದ ಸಂದೇಶವು ಬದಲಾಗುವುದಿಲ್ಲ.

1 ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು. 2ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು. 3ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು. ಸೃಷ್ಟಿಯಾದ ಎಲ್ಲವುಗಳಲ್ಲಿ ಆತನಿಲ್ಲದೆ ಒಂದಾದರೂ ಸೃಷ್ಟಿಯಾಗಲಿಲ್ಲ. 4ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲು ಆ ಬೆಳಕನ್ನು ಮುಸುಕಲಿಲ್ಲ.

6ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು. ಅವನ ಹೆಸರು ಯೋಹಾನನು. 7ಆ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರೂ ನಂಬುವಂತೆ ಅವನು ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡಲು ಬಂದನು. 8ಅವನೇ ಆ ಬೆಳಕಲ್ಲ; ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ನೀಡಲೆಂದೇ ಬಂದವನು.

9ನಿಜವಾದ ಬೆಳಕು ಲೋಕಕ್ಕೆ ಬರುವುದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು. 10ಆತನು ಲೋಕದಲ್ಲಿ ಇದ್ದನು ಮತ್ತು ಲೋಕವು ಆತನ ಮೂಲಕ ಉಂಟಾಯಿತು, ಆದರೂ ಲೋಕವು ಆತನನ್ನು ಅರಿತುಕೊಳ್ಳಲಿಲ್ಲ. 11ಆತನು ತನ್ನ ಸ್ವಂತ ಜನರ ಬಳಿಗೆ ಬಂದನು; ಆದರೆ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ. 12ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು. 13ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು.

14ಆ ವಾಕ್ಯವೆಂಬುವವನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು.

15ಆತನ ವಿಷಯವಾಗಿ ಯೋಹಾನನು ಸಾಕ್ಷಿಕೊಡುತ್ತಾನೆ, ಹೇಗೆಂದರೆ “‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದಾತನು ಈತನೇ” ಎಂದು ಘೋಷಿಸಿದನು.

16ಯೇಸು ಕ್ರಿಸ್ತನ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು. 18ದೇವರನ್ನು ಯಾರೂ ಎಂದೂ ನೋಡಿಲ್ಲ. ತಂದೆಯ ಹೃದಯದಲ್ಲಿರುವ ಏಕಪುತ್ರನೂ ಸ್ವತಃ ದೇವರೂ ಆಗಿರುವಾತನೇ, ತಂದೆಯನ್ನು ತಿಳಿಯಪಡಿಸಿದ್ದಾನೆ.

ಯೋಹಾನ 1: 1-18

ಸುವಾರ್ತೆಗಳು ಯೇಸುವಿನ ಸಂಪೂರ್ಣ ವಿವರವನ್ನು ಚಿತ್ರಿಸಲು ಮುಂದುವರಿಯುತ್ತವೆ, ಆದುದರಿಂದ ನಾವು ಆತನು ಯಾರೆಂದು, ಆತನ ಗುರಿ ಏನೆಂದು ಮತ್ತು ಇದು ನಮಗೆ ಏನನ್ನು ಅರ್ಥೈಸಬಹುದೆಂದು ಅರ್ಥಮಾಡಿಕೊಳ್ಳಬಹುದು. (‘ಯೋಹಾನನ’ ಕುರಿತು ಇಲ್ಲಿ ವಿವರಿಸಲಾಗಿದೆ). ಸುವಾರ್ತೆಯು ಯೇಸುವನ್ನು ದೇವರ ವಾಕ್ಯವೆಂದು ಪರಿಚಯಿಸುವದರಿಂದ ಇದು ಕ್ರೈಸ್ತರಿಗೆ ಮಾತ್ರ ಬರೆಯಲ್ಪಡಲಿಲ್ಲ ಆದರೆ ದೇವರನ್ನು, ಅಥವಾ ಬ್ರಹ್ಮನನ್ನು ಅರ್ಥಮಾಡಿಕೊಳ್ಳಬೇಕೆಂದಿರುವವರಿಗೆಲ್ಲಾ, ಹೆಚ್ಚು ಸ್ಪಷ್ಟವಾಗಿ ಮತ್ತು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾ ಇದು ಸಾರ್ವತ್ರಿಕ ಬರವಣಿಗೆಯಾಗಿದೆ ಎಂದು ನಮಗೆ ತಿಳಿದಿದೆ. ವಾಕ್ಯ ಧರ್ಮಶಾಸ್ತ್ರಮತ್ತು ಮನಃಶಾಸ್ತ್ರ ಪದಗಳಲ್ಲಿ ಆವರಿಸಿರುವ ಕಾರಣ ಮತ್ತು ‘ಯಾರೂ ದೇವರನ್ನು ನೋಡಿಲ್ಲ’ ಎಂಬ ಕಾರಣದಿಂದ, ಯೇಸುವನ್ನು ವ್ಯಕ್ತಿಯಾಗಿ ಪರಿಗಣಿಸುವದರಲ್ಲಿ ನಮ್ಮ ಆತ್ಮವನ್ನು (ಆತ್ಮನು) ಮತ್ತು ದೇವರನ್ನು (ಬ್ರಹ್ಮನು) ಅರ್ಥಮಾಡಿಕೊಳ್ಳಲು ಇದಕ್ಕಿಂತ ಉತ್ತಮವಾದ ದಾರಿ ಯಾವುದು? ಪರಿಶೀಲಿಸಬಹುದಾದ ಇತಿಹಾಸದಲ್ಲಿ ಆತನು ಬದುಕಿದ್ದನು, ನಡೆದನು ಮತ್ತು ಕಲಿಸಿದನು. ನಾವು ಆತನ ಜನನದಿಂದ ಪ್ರಾರಂಭಿಸುತ್ತೇವೆ, ಸುವಾರ್ತೆಗಳಲ್ಲಿ ‘ವಾಕ್ಯವು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು’ ಎಂಬ  ಘಟನೆಯಾಗಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *